ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾದ ಕಂಗನಾ ರಾಣವತ್

Update: 2020-09-13 17:56 GMT

 ಮುಂಬೈ, ಸೆ. 13: ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆಯೊಂದಿಗೆ ಬಿಕ್ಕಟ್ಟು ಹೊಂದಿರುವ ಬಾಲಿವುಡ್ ನಟಿ ಕಂಗನಾ ರಾಣವತ್ ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಇಲ್ಲಿ ರವಿವಾರ ಭೇಟಿಯಾಗಿದ್ದಾರೆ ಹಾಗೂ ತನಗಾದ ಅನ್ಯಾಯದ ಬಗ್ಗೆ ತಿಳಿಸಿದ್ದಾರೆ.

ಬಾಂದ್ರಾ ಉಪನಗರದ ಪಾಲಿ ಹಿಲ್‌ನಲ್ಲಿರುವ ಕಂಗನಾ ರಾಣವತ್ ಅವರ ಅಕ್ರಮ ಬಂಗಲೆಯನ್ನು ಶಿವಸೇನೆ ಆಡಳಿತದ ಬೃಹನ್ಮುಂಬೈ ಮಹಾನಗರ ಪಾಲಿಕೆ ಧ್ವಂಸಗೊಳಿಸಿದ ಬಳಿಕ ಕಂಗನಾ ರಾಣವತ್ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕಂಗನಾ ರಾಣವತ್, “ನಾನು ರಾಜ್ಯಪಾಲರನ್ನು ಭೇಟಿಯಾಗಿದ್ದೇನೆ. ಅವರು ನನ್ನನ್ನು ಮಗಳಂತೆ ಪರಿಗಣಿಸಿದರು. ನಾನು ಅವರನ್ನು ಪ್ರಜೆಯಾಗಿ ಭೇಟಿಯಾಗಿದ್ದೇನೆ. ನಾನು ಎಂದಿಗೂ ರಾಜಕೀಯಕ್ಕೆ ಹೋಗುವುದಿಲ್ಲ” ಎಂದಿದ್ದಾರೆ.

“ನನಗಾದ ಅನ್ಯಾಯವನ್ನು ಅವರಿಗೆ ತಿಳಿಸಿದ್ದೇನೆ. ಏನು ನಡೆದಿದೆಯೋ ಅದು ಅನುಚಿತ. ಅದು ಅಗೌರವಯುತ ನಡತೆ” ಎಂದು ಕಂಗನಾ ರಾಣಾವತ್ ಹೇಳಿದ್ದಾರೆ.

“ನನಗೆ ಚಿತ್ರೋದ್ಯಮದ ಮಾಫಿಯಾಕ್ಕಿಂತ ಮುಂಬೈ ಪೊಲೀಸರನ್ನು ಕಂಡರೆ ಭಯವಾಗುತ್ತದೆ” ಎಂದು ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಮುಂಬೈಗೆ ಹೋಲಿಸಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಂಗನಾ ರಾಣಾವತ್ ಹಾಗೂ ಶಿವಸೇನೆ ನಡುವೆ ಬಿಕ್ಕಟ್ಟು ಆರಂಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News