ಮರಕ್ಕೆ ಕಾರು ಢಿಕ್ಕಿ: ಚಾಲಕ ಮೃತ್ಯು, ಮೂವರ ಸ್ಥಿತಿ ಗಂಭೀರ

Update: 2020-09-13 18:10 GMT

ಶಿವಮೊಗ್ಗ: ಕಾಚಿನಕಟ್ಟೆ ಸಮೀಪದ ಮಲ್ಲಪ್ಪನಕೆರೆ ಬಳಿ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಮೂಲತಃ ಎನ್.ಆರ್.ಪುರದವರಾದ ಇವರು ಶಿವಮೊಗ್ಗದಿಂದ ತಮ್ಮ ಊರಿಗೆ ಹೋಗುವಾಗ ಘಟನೆ ಸಂಭವಿಸಿದೆ. ವೇಗವಾಗಿ ಬಂದ ಕಾರು ಮರಕ್ಕೆ ಅಪ್ಪಳಿಸಿದೆ. ನಂತರ ವಿದ್ಯುತ್ ಕಂಬಕ್ಕೆ ಗುದ್ದಿದೆ. ಇದರ ಪರಿಣಾಮ ಕಾರು ನಜ್ಜು ಗುಜ್ಜಾಗಿದ್ದು, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನುಳಿದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಸಂಪೂರ್ಣ ಜಖಂಗೊಂಡಿದ್ದು, ಒಳಗೆ ಸಿಲುಕಿದ್ದ ಗಾಯಾಳುವನ್ನು ಹೊರಗೆ ತೆಗೆಯುವುದಕ್ಕಾಗಿ ಪೊಲೀಸರು ಮತ್ತು ಸ್ಥಳೀಯರು ಕಷ್ಟಪಟ್ಟರು. ಬಳಿಕ ಕಟರ್ ಸಹಾಯದಿಂದ ಕಬ್ಬಿಣ ಕತ್ತರಿಸಿ ವ್ಯಕ್ತಿಯನ್ನು ಹೊರ ತೆಗೆಯಲಾಗಿದೆ.

ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News