ರಾಜ್ಯದಲ್ಲಿ ಕೋವಿಡ್ ಗೆ ಇಂದು 119 ಮಂದಿ ಬಲಿ; 8,244 ಮಂದಿಗೆ ಸೋಂಕು ದೃಢ
ಬೆಂಗಳೂರು, ಸೆ.14: ರಾಜ್ಯದಲ್ಲಿ ಸೋಮವಾರ 8,244 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 119 ಜನರು ಸೋಂಕಿಗೆ ಬಲಿಯಾಗಿದ್ದು, 8,865 ಜನರು ಗುಣಮುಖರಾಗಿದ್ದಾರೆ.
ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 4,67,689ಕ್ಕೆ ತಲುಪಿದ್ದು, 800 ಸೋಂಕಿತರು ಐಸಿಯುನಲ್ಲಿದ್ದಾರೆ.
ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 7,384ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 98,463ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
119 ಸೋಂಕಿತರು ಬಲಿ: ಬಾಗಲಕೋಟೆ 3, ಬಳ್ಳಾರಿ 7, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 37, ಬೀದರ್ 2, ಚಾಮರಾಜನಗರ 2, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 3, ದಕ್ಷಿಣ ಕನ್ನಡ 5, ಧಾರವಾಡ 9, ಗದಗ 2, ಹಾಸನ 1, ಹಾವೇರಿ 2, ಕಲಬುರಗಿ 3, ಕೊಡಗು 1, ಕೊಪ್ಪಳ 3, ಮಂಡ್ಯ 1, ಮೈಸೂರು 12, ರಾಯಚೂರು 3, ಶಿವಮೊಗ್ಗ 5, ತುಮಕೂರು 6, ಉತ್ತರ ಕನ್ನಡ 2, ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 8,244 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 166, ಬಳ್ಳಾರಿ 264, ಬೆಳಗಾವಿ 167, ಬೆಂಗಳೂರು ಗ್ರಾಮಾಂತರ 275, ಬೆಂಗಳೂರು ನಗರ 2,966, ಬೀದರ್ 51, ಚಾಮರಾಜನಗರ 54, ಚಿಕ್ಕಬಳ್ಳಾಪುರ 140, ಚಿಕ್ಕಮಗಳೂರು 200, ಚಿತ್ರದುರ್ಗ 198, ದಕ್ಷಿಣ ಕನ್ನಡ 413, ದಾವಣಗೆರೆ 325, ಧಾರವಾಡ 117, ಗದಗ 96, ಹಾಸನ 295, ಹಾವೇರಿ 208, ಕಲಬುರ್ಗಿ 185, ಕೊಡಗು 32, ಕೋಲಾರ 57, ಕೊಪ್ಪಳ 162, ಮಂಡ್ಯ 109, ಮೈಸೂರು 677, ರಾಯಚೂರು 51, ರಾಮನಗರ 113, ಶಿವಮೊಗ್ಗ 220, ತುಮಕೂರು 192, ಉಡುಪಿ 40, ಉತ್ತರ ಕನ್ನಡ 191, ವಿಜಯಪುರ 176, ಯಾದಗಿರಿ ಜಿಲ್ಲೆಯಲ್ಲಿ 104 ಪ್ರಕರಣಗಳು ಪತ್ತೆಯಾಗಿವೆ.
ಶಾಸಕ ಯತ್ನಾಳ ಹೋಂ ಕ್ವಾರಂಟೈನ್
ಸ್ನೇಹಿತರಿಗೆ ಕೊರೋನ ಸೋಂಕು ದೃಢಪಟ್ಟಿರುವುದರಿಂದ ತಾನು ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್ಗೆ ಒಳಗಾಗಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.