ಸರಕಾರ ಭೂಗಳ್ಳರೊಂದಿಗೆ ಶಾಮೀಲಾಗಿ ಬೆಂಗಳೂರನ್ನೇ ಮಾರಾಟಕ್ಕಿಟ್ಟಿದೆ: ಕಾಂಗ್ರೆಸ್ ಆರೋಪ

Update: 2020-09-16 14:40 GMT

ಬೆಂಗಳೂರು, ಸೆ.16: ಭೂಗಳ್ಳರು, ಒತ್ತುವರಿದಾರರಿಂದ ಸರಕಾರಿ ಜಮೀನು ವಶಪಡಿಸಿಕೊಳ್ಳಲಾಗದ ನಾಲಾಯಕ್ ಬಿಜೆಪಿ ರಾಜ್ಯ ಸರಕಾರ, ಅದೇ ಒತ್ತುವರಿದಾರರು, ಭೂಗಳ್ಳರಿಂದ ಹಣ ಪಡೆದು ಅವರಿಗೇ ಬೆಂಗಳೂರಿನ ಬೆಲೆಬಾಳುವ ಸರಕಾರಿ ಜಮೀನು ಮಾರಲು ಹೊರಟಿದೆ. ಬೆಂಗಳೂರು ಮಾರಾಟದಿಂದ ಲಾಭ ಕೇವಲ ಬಿಜೆಪಿ ಹಾಗೂ ಭೂಗಳ್ಳರಿಗೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.

ಭ್ರಷ್ಟ ರಾಜ್ಯ ಬಿಜೆಪಿ ಸರಕಾರ ಭೂಗಳ್ಳರು, ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಶಾಮೀಲಾಗಿ ಬೆಂಗಳೂರನ್ನೇ ಮಾರಾಟಕ್ಕಿಟ್ಟಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 18 ಕಿ.ಮೀ ವ್ಯಾಪ್ತಿಯ 21,000 ಎಕರೆ ಸರಕಾರಿ ಜಮೀನು ಮಾರಾಟಕ್ಕೆ ಮುಂದಾಗಿರುವ ಬಿಜೆಪಿ ಸರಕಾರದ ಹಗಲು ದರೋಡೆಯ ಪ್ರಯತ್ನ ಖಂಡನೀಯ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕೊರೋನ ಸೋಂಕಿತರ ಸಂಖ್ಯೆ ಲಕ್ಷಗಟ್ಟಲೆ ಇದ್ದರೂ ಸಹ ಬೆಂಗಳೂರಿನ ಕೋವಿಡ್ ಕೇಂದ್ರವನ್ನು ಬಿಜೆಪಿ ಸರಕಾರ ಮುಚ್ಚುತ್ತಿರುವುದು ತೀರಾ ಹಾಸ್ಯಾಸ್ಪದ ಸಂಗತಿಯಾಗಿದೆ. ಕೋವಿಡ್ ಕೇಂದ್ರವನ್ನು ಹೀಗೆ ಮುಚ್ಚುವುದಾದರೆ ಅದನ್ನು ತೆರೆದಿದ್ದು ಏಕೆ? ನಿಮ್ಮ ಸರಕಾರದ ಪ್ರಚಾರಕ್ಕೋ ಅಥವಾ ಭ್ರಷ್ಟಾಚಾರ ಮಾಡುವುದಕ್ಕೋ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News