ಮಂಡ್ಯದಲ್ಲಿ ಮತ್ತೆ ದೇವಾಲಯದ ಹುಂಡಿ ಕಳವು

Update: 2020-09-18 17:14 GMT

ಮಂಡ್ಯ, ಸೆ18: ಕಳೆದ ವಾರವಷ್ಟೇ ಮಂಡ್ಯದಲ್ಲಿ ಮೂವರು ಅರ್ಚಕರನ್ನು ಕೊಂದು ದೇಗುಲದಲ್ಲಿ ಕಳ್ಳತನ ಮಾಡಲಾಗಿರುವ ಘಟನೆ ಹಸಿಯಾಗಿರುವಾಗಲೇ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ದೇವುಳದ ಗ್ರಿಲ್ ಬಾಗಿಲು ಮುರಿದಿರುವ ದುಷ್ಕರ್ಮಿಗಳು, ಹುಂಡಿ ಹೊತ್ತೊಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಾಲ್ಕೈದು ಜನರ ತಂಡದಿಂದ ಕೃತ್ಯ ನಡೆದಿದ್ದು, ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಸೆರೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News