ಶಿವಮೊಗ್ಗ : ಸಾರಿಗೆ ಅಧಿಕಾರಿಗಳಿಂದ ದಾಳಿ, ತೆರಿಗೆ ಪಾವತಿಸದ ವಾಹನಗಳಿಗೆ ದಂಡ

Update: 2020-09-20 06:37 GMT

ಶಿವಮೊಗ್ಗ : ಸಾರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ವಾಹನಗಳಿಗೆ ದಂಡ ವಿಧಿಸಿದ್ದಾರೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಶಿಕಲಾ ಅವರ ಮಾರ್ಗದರ್ಶನದಲ್ಲಿ ಸಾಗರ ಹಾಗೂ ಹೊಸನಗರದಲ್ಲಿ ದಾಳಿ ನಡೆಸಿ, ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಿಪ್ಪನ್ ಪೇಟೆಯಲ್ಲಿ ಜೆಸಿಬಿ ತಡೆದು ಪರಿಶೀಲಿಸಿದಾಗ ತೆರಿಗೆ ಪಾವತಿಸದಿರುವುದು ಕಂಡುಬಂದಿದೆ. ಹಾಗಾಗಿ ಜೆಸಿಬಿಗೆ 2.05 ಲಕ್ಷ ರೂ ದಂಡ ವಿಧಿಸಲಾಗಿದೆ.ಇನ್ನೂ ಲಾರಿಗೆ  70 ಸಾವಿರ ರೂ  ದಂಡ ಹಾಕಲಾಗಿದೆ ಮತ್ತು ಹೊಸನಗರದಲ್ಲಿ ಲಾರಿಯೊಂದಕ್ಕೆ 77 ಸಾವಿರ ರೂ ದಂಡ ಹಾಕಲಾಗಿದೆ. ಇದೇ ರೀತಿ ಸಾಗರದಲ್ಲಿ ದಾಳಿ ನಡೆಸಿ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ಲಾರಿ ತಡೆದು 5.27 ಲಕ್ಷ ರೂ. ದಂಡ ವಿಧಿಸಿ, ಲಾರಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಾರ್ಯಾಚರಣೆಯಲ್ಲಿ ಮೋಟಾರು ವಾಹನ ನಿರೀಕ್ಷಕ ವಾಸುದೇವ್, ಸಿಬ್ಬಂದಿಗಳಾದ ನಿಂಗಪ್ಪ, ಉಮೇಶ್ ಅವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News