ಮೈಸೂರು : ನಿವೃತ್ತ ಪ್ರಾಧ್ಯಾಪಕರನ್ನು ಚಾಕುವಿನಿಂದ ಇರಿದು ಹತ್ಯೆ

Update: 2020-09-21 17:36 GMT

ಮೈಸೂರು : ನಿವೃತ್ತ ಪ್ರಾಧ್ಯಾಪಕರೋರ್ವರನ್ನು ಅವರ ನಿವಾಸದಲ್ಲೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಿವೇದಿತಾನಗರದಲ್ಲಿ ನಡೆದಿದೆ.

ನಿವೃತ್ತ ಪ್ರಾಧ್ಯಾಪಕ ಪರಶಿವಮೂರ್ತಿ (67) ಮೃತರು ಎಂದು ಗುರುತಿಸಲಾಗಿದೆ. ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ರವಿವಾರ ರಾತ್ರಿ 7.45ರ ಸುಮಾರಿಗೆ ಕರೆಗಂಟೆ ಒತ್ತಿದ ಇಬ್ಬರು ಹಂತಕರು, ಪರಶಿವಮೂರ್ತಿ ಬಾಗಿಲು ತೆರೆಯುತ್ತಿದ್ದಂತೆ ಅವರ ಎದೆ, ಹೊಟ್ಟೆ ಮತ್ತು ಕುತ್ತಿಗೆ ಭಾಗಗಳಿಗೆ ಇರಿದು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News