"ರಾತ್ರಿಯಿಡೀ ನಿದ್ದೆ ಮಾಡಿಲ್ಲ, ಒಂದು ದಿನ ಉಪವಾಸ ಆಚರಿಸುತ್ತೇನೆ"

Update: 2020-09-22 07:58 GMT
ಹರಿವಂಶ್

ಹೊಸದಿಲ್ಲಿ: "ರಾಜ್ಯಸಭೆಯಲ್ಲಿನ ಗದ್ದಲದ ವಾತಾವರಣದಿಂದ ಹಾಗೂ ವಿಪಕ್ಷ ಸದಸ್ಯರ ವರ್ತನೆಯಿಂದ ನನ್ನ ಮನಸ್ಸಿಗೆ ನೋವಾಗಿದ್ದು ಇಡೀ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗಿಲ್ಲ,'' ಎಂದು  ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಉಪಸಭಾಪತಿ ಹರಿವಂಶ್ ಅವರು ಪತ್ರ ಬರೆದಿದ್ದಾರೆ.

"ಸದನದಲ್ಲಿ ವಿಪಕ್ಷಗಳ ವರ್ತನೆಯಿಂದ ಬೇಸತ್ತು ನಾಳೆಯ ತನಕ ಒಂದು ದಿನ ಉಪವಾಸ ಆಚರಿಸುತ್ತೇನೆ,'' ಎಂದು ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಇಂದು ಮುಂಜಾನೆ ಸಂಸತ್ ಆವರಣದ ಹಸಿರು ಹುಲ್ಲು ಪ್ರದೇಶದಲ್ಲಿ ಧರಣಿ ಕುಳಿತಿರುವ  ಎಂಟು ಮಂದಿ ಉಚ್ಛಾಟಿತ  ಸಂಸದರಿಗೆ ಹರಿವಂಶ್ ಚಹಾ  ತೆಗೆದುಕೊಂಡು ಬಂದಿದ್ದರು.  ಈ ಸಂದರ್ಭ ಕೆಲವು ಸಂಸದರು ಅವರೊಂದಿಗೆ ಕೇಂದ್ರದ ನಿಲುವನ್ನು ಖಂಡಿಸಿ ಕೃಷಿ ಮಸೂದೆ ಕುರಿತಂತೆ ವಿಪಕ್ಷಗಳ ದನಿಯನ್ನು ಕೇಂದ್ರ ಅಮುಕಲು ಯತ್ನಿಸುತ್ತಿದೆಯೆಂದು ಹೇಳಿದರೆ ಇನ್ನು ಕೆಲವರು ಮೇಲ್ಮನೆಯ ಗದ್ದಲದ ವಾತಾವರಣಕ್ಕೆ ಬಿಹಾರ ಚುನಾವಣೆ ಜತೆ ಸಂಬಂಧವಿದೆ ಎಂದಿದ್ದರು.

ಸಂಸದರ ಮನವೊಲಿಸಲು ಹರಿವಂಶ್ ಅವರು ವಿಫಲರಾದ ನಂತರ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News