ಯುವತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Update: 2020-09-25 17:15 GMT

ಮೈಸೂರು,ಸೆ.25: ಯುವತಿಯೋರ್ವಳ ಮೃತದೇಹ ನೇಣು ಬಿಗಿದ ಸ್ಥಿಯಲ್ಲಿ ಮೈಸೂರಿನ ಗಣೇಶ ನಗರದಲ್ಲಿ ಪತ್ತೆಯಾಗಿದೆ.

ನಂಜನಗೂಡು ತಾಲೂಕು ಕೂಡ್ಲಾಪುರ ಗ್ರಾಮದ ಕುಮಾರಿ(24) ಮೃತ ಯುವತಿ. ಇವರು ಕಳೆದ ಎರಡು ವರ್ಷಗಳ ಹಿಂದೆ ಮೈಸೂರಿನ ಮಹೇಶ್ ಎಂಬುವವರ ಜೊತೆ ವಿವಾಹವಾಗಿದ್ದರು. ವರದಕ್ಷಿಣೆ ಆಸೆಗಾಗಿ ಪತಿ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಮೃತ ಕುಮಾರಿ ಮನೆಯವರು ಆರೋಪಿಸಿದ್ದಾರೆ.

ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News