ಕರ್ನಾಟಕ ಬಂದ್‍ಗೆ ಜ್ಯುವೆಲರಿ ಅಸೋಸಿಯೇಶನ್ ನೈತಿಕ ಬೆಂಬಲ

Update: 2020-09-27 13:28 GMT

ಬೆಂಗಳೂರು, ಸೆ.27: ರಾಜ್ಯದಾದ್ಯಂತ ರೈತರು ಹಾಗೂ ರೈತರ ಪರ ಸಂಘಟನೆಯವರು ಸೋಮವಾರ(ಸೆ.28) ಕರೆ ನೀಡಿರುವಂತಹ ಕರ್ನಾಟಕ ಬಂದ್ ಗೆ ರಾಜ್ಯ ಜ್ಯುವೆಲರಿ ಅಸೋಶಿಯೇಶನ್ ಅಧ್ಯಕ್ಷ ಟಿ.ಎ.ಶರವಣ ನೈತಿಕ ಬೆಂಬಲವನ್ನು ಸೂಚಿಸಿದ್ದಾರೆ.

ಪ್ರಸಕ್ತ ವಿದ್ಯಮಾನದಲ್ಲಿ ಆರ್ಥಿಕ ಹಿನ್ನಡೆ ಆಗಿರುವುದರಿಂದ ಚಿನ್ನದ ಅಂಗಡಿ ಮಾಲಕರು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಒಂದು ದಿನ ಮುಚ್ಚುವುದು ಅವರವರ ವಿವೇಚನೆಗೆ ಬಿಟ್ಟದ್ದು. ಆದರೆ ರೈತಪರ ಹಾಗೂ ಕನ್ನಡಪರ ಸಂಘಟನೆಗಳು ತೆಗೆದುಕೊಂಡಿರುವಂತಹ ನಿರ್ಧಾರಕ್ಕೆ ನಾವು ನೈತಿಕ ಬೆಂಬಲವನ್ನು ಸೂಚಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News