ಸತ್ಯಮೇವ ಜಯತೇ: ಬಾಬರಿ ಮಸೀದಿ ದ್ವಂಸ ಪ್ರಕರಣದ ತೀರ್ಪನ್ನು ಸ್ವಾಗತಿಸಿದ ಸಿಎಂ ಯಡಿಯೂರಪ್ಪ
Update: 2020-09-30 13:38 GMT
ಬೆಂಗಳೂರು, ಸೆ.30: ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸ್ವಾಗತಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸತ್ಯಮೇವ ಜಯತೇ! ಬಾಬರಿ ಕಟ್ಟಡ ಧ್ವಂಸ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ಇದು ಪೂರ್ವನಿಯೋಜಿತ ಕೃತ್ಯವಲ್ಲ ಎಂದು ನ್ಯಾಯಾಲಯ ಹೇಳಿದ್ದು, ಶ್ರೀ ಅಡ್ವಾಣಿಜೀ, ಶ್ರೀ ಮುರಳಿ ಮನೋಹರ್ ಜೋಷಿಜೀ, ಸಾಧ್ವಿ ಉಮಾಭಾರತಿ ಸೇರಿದಂತೆ ಅನೇಕ ಮುಖಂಡರು, ಸಂತರು, ವಿ.ಹೆಚ್.ಪಿ ಕಾರ್ಯಕರ್ತರನ್ನು ಖುಲಾಸೆಗೊಳಿಸಿದ್ದು ಸತ್ಯಕ್ಕೆ ಜಯ ಸಂದಿದೆ'' ಎಂದು ತಿಳಿಸಿದ್ದಾರೆ.