ಫಾದರ್ ಚಸರಾ ಕನ್ನಡ ಮತ್ತು ಸಂಸ್ಕೃತಿ ಪ್ರಶಸ್ತಿಗೆ ಪ್ರೆಸಿಲ್ಲಾ ಪೆರೇರಾ ಹಾಗೂ ಬಾ.ಹ.ಶೇಖರಪ್ಪ ಆಯ್ಕೆ

Update: 2020-09-30 17:20 GMT

ಬೆಂಗಳೂರು, ಸೆ.30: ಕನ್ನಡ ಸಾಹಿತ್ಯ ಪರಿಷತ್ 2020ನೇ ಸಾಲಿನ ಫಾದರ್ ಚಸರಾ ಕನ್ನಡ ಮತ್ತು ಸಂಸ್ಕೃತಿ ಪ್ರಶಸ್ತಿಗೆ ಕನ್ನಡದ ಕ್ರೈಸ್ತ ಸಮುದಾಯದ ಸಾಧಕಿ ಪ್ರೆಸಿಲ್ಲಾ ಪೆರೇರಾ ಮತ್ತು ಹೋರಾಟಗಾರ ಬಾ.ಹ.ಶೇಖರಪ್ಪ ಆಯ್ಕೆಯಾಗಿದ್ದಾರೆ.

ಕಸಾಪ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಪ್ರೆಸಿಲ್ಲಾ ಪೆರೇರಾ ಹಾಗೂ ಹೋರಾಟಗಾರ ಬಾ.ಹ.ಶೇಖರಪ್ಪರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 10ಸಾವಿರ ರೂ.ನಗದು ಹಾಗೂ ಪುರಸ್ಕಾರವನ್ನು ಒಳಗೊಂಡಿದೆ. ಆಯ್ಕೆ ಸಮಿತಿ ಸಭೆಯಲ್ಲಿ ಸದಸ್ಯರಾದ ರೀಟಾರೀನಿ, ರಫಾಯಲ್‍ ರಾಜ್, ಕಸಾಪ ಗೌರವ ಕಾರ್ಯದರ್ಶಿ ಡಾ.ರಾಜಶೇಖರ ಹತಗುಂದಿ ಮತ್ತು ವ.ಚ.ಚನ್ನೇಗೌಡ, ಪ್ರಕಟನಾ ವಿಭಾಗದರಾಜ್ಯ ಸಂಚಾಲಕ ಡಾ.ಪದ್ಮರಾಜದಂಡಾವತಿ ಉಪಸ್ಥಿತರಿದ್ದರೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News