ಸ್ನೇಹಿತನ ತಲೆಗೆ ಬಾಟಲಿಯಿಂದ ಹೊಡೆದು ಹತ್ಯೆ

Update: 2020-09-30 18:26 GMT

ಮೈಸೂರು,ಸೆ.30: ವ್ಯಕ್ತಿಯೋರ್ವ ತನ್ನ ಸ್ನೇಹಿತನ ತಲೆಗೆ ಬಾಟಲಿಯಿಂದ ಹೊಡೆದು ಕೊಲೆ ಮಾಡಿ, ಪರಾರಿಯಾಗಲು ಯತ್ನಿಸಿದ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉದಯಗಿರಿ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ನಗರದ ನಿವಾಸಿ ಶ್ರೀನಿವಾಸ(34) ಕೊಲೆಯಾದ ವ್ಯಕ್ತಿ. ಇದೇ ಬಡಾವಣೆಯ ಗಂಗರಾಜು(32) ಹತ್ಯೆ ಆರೋಪಿ.

ಸ್ನೇಹಿತರಾಗಿದ್ದ ಇಬ್ಬರೂ ಜೊತೆಯಲ್ಲೇ ಪೇಂಟಿಂಗ್ ಕೆಲಸದಲ್ಲಿ ತೊಡಗಿದ್ದರು. ಕ್ಷುಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದ್ದು ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಗಂಗರಾಜು ಮದ್ಯದ ಬಾಟಲಿಯಿಂದ ಶ್ರೀನಿವಾಸನ ತಲೆಗೆ ಹೊಡೆದು ಹತ್ಯೆ ಮಾಡಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News