ಬ್ಯಾಡಗಿ: ಬೈಕ್ ಕಳವು ಆರೋಪಿಗಳ ಬಂಧನ

Update: 2020-10-01 07:51 GMT

ಮುಂಡಗೋಡ, ಅ.1: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ಮೂವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ
ಚಾಂದ ಬಾಷಾ ಶಿಕಾರಿಪುರ(26), ಚಂದ್ರು ಬುಡ್ಡಪ್ಪನಹಳ್ಳಿ(28) ಹಾಗೂ ಹಾಗೂ ಹಝರತಲಿ ಶಮನಾಬಾವಿ(32) ಬಂಧಿತ ಆರೋಪಿಗಳಾಗಿದ್ದಾರೆ.

 ಆರೋಪಿಗಳಿಂದ ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ ಪ್ರಭುಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಸೈ ಬಸವರಾಜ ಮಬನೂರ, ಎಎಸ್ಸೈ ಎಸ್.ವಿ.ಚೌಹಾಣ್, ಅಶೋಕ ರಾಥೋಡ್, ಸಿಬ್ಬಂದಿಯಾದ ರಾಘವೇಂದ್ರ ಜಿ., ರಾಘವೇಂದ್ರ ಪಟಗಾರ, ಭಗವಾನ ಗಾಂವ್ಕರ್, ಅರುಣ್ ಕುಮಾರ್ ಬಾಗೇವಾಡಿ, ಜಿ.ಬಿ.ವಿನೋದ್ ಕುಮಾರ್, ಕುಮಾರ್ ಬಣಕಾರ ಭಾಗವಹಿಸಿದ್ದರು
ಮುಂಡಗೋಡ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News