ದಂಡ ಕಟ್ಟಿದರೂ ಬೈಕ್ ಕೀ ಕೊಡಲು ಸತಾಯಿಸಿದ ಆರೋಪ: ಪೊಲೀಸರ ವಿರುದ್ಧ ಎಸ್​ಪಿಗೆ ದೂರು ನೀಡಿದ ಯುವಕ

Update: 2020-10-01 13:10 GMT

ಕೊಳ್ಳೇಗಾಲ, ಅ.1: ದಂಡ ಕಟ್ಟಿದರು ಕೂಡ ಬೈಕ್ ಕೀ ಕೊಡಲು ಒಂದೂವರೆ ಗಂಟೆ ಕೊಳ್ಳೇಗಾಲ ಪೊಲೀಸರು ತನ್ನನ್ನು ಸತಾಯಿಸಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡಿದ ಘಟನೆ ನಡೆದಿದೆ.

ಕೊಳ್ಳೇಗಾಲ ಪಟ್ಟಣದ ಸಂದೇಶ್ ಎಂಬಾತ ಪೊಲೀಸರ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರಿಗೆ ದೂರು ನೀಡಿದ್ದಾನೆ. ಪೊಲೀಸರು ಅನಾವಶ್ಯಕವಾಗಿ ನನ್ನ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.

ಸಂದೇಶ್ ಪೊಲೀಸರ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರಲ್ಲಿ ವಾಟ್ಸಾಪ್ ಮೂಲಕ ಅಳಲು ತೋಡಿಕೊಂಡು ಪೊಲೀಸರ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾನೆ. ಕಳೆದ ಸೆ.28 ರಂದು ಬೈಕ್​ನಲ್ಲಿ ತಂದೆಯನ್ನು ಕರೆತರಲು ತೆರಳುತ್ತಿದ್ದಾಗ ಹೆಲ್ಮೆಟ್ ಧರಿಸದ್ದರಿಂದ ಪೊಲೀಸರು ಬೈಕ್ ಹಿಡಿದು ಕೀ ಕಿತ್ತುಕೊಂಡಿದ್ದರು. ಬಳಿಕ ದಂಡ ಪಾವತಿಸಿದರೂ ಬೈಕ್ ಕೀ ಕೊಡಲು ಸತಾಯಿಸಿ, ಒಂದೂವರೆ ತಾಸು ಕಾಯಿಸಿದ್ದಾರೆ. ನನ್ನ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News