ಕಾಲು ಮುರಿದುಕೊಂಡ ಬಡವನ ಚಿಕಿತ್ಸೆಗೆ ಹಾಗೂ ಸ್ವಗ್ರಾಮಕ್ಕೆ ತೆರಳಲು ಹಣ ನೀಡಿದ ಪಿಎಸ್ಸೈ

Update: 2020-10-04 15:00 GMT

ಧಾರವಾಡ, ಅ. 4: ಇಲ್ಲಿನ ರಾಜ್ಯ ಹೆದ್ದಾರಿ ಬಳಿ ಬೈಕ್ ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿ ಕಾಲು ಮುರಿದುಕೊಂಡು, ಬದುಕು ಕಳೆದುಕೊಂಡಿದ್ದ ಮಧ್ಯಪ್ರದೇಶದ ಚಾಪೆ ಮಾರಾಟಗಾರನಿಗೆ ಚಿಕಿತ್ಸೆಗೆ ಹಾಗೂ ಸ್ವಗ್ರಾಮಕ್ಕೆ ತೆರಳಲು ಪಿಎಸ್ಸೈಯೊಬ್ಬರು ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಸೈ ಮಹೇಂದ್ರಕುಮಾರ್ ಸಹಾಯ ಮಾಡಿ ಮಾನವೀಯತೆಯ ಕೆಲಸ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ರಾಜ್ಯ ಹೆದ್ದಾರಿ ಬಳಿ ಬೈಕ್ ಹಾಗೂ ಲಾರಿಯ ನಡುವೆ ಅಪಘಾತವಾಗಿತ್ತು. ಅದರಲ್ಲಿ ಮಧ್ಯಪ್ರದೇಶ ಇಂದೋರ ಬಳಿಯ ನಿವಾಸಿ ಈಶ್ವರ ಗಾಯಗೊಂಡು ಕಾಲು ಮುರಿದುಕೊಂಡಿದ್ದರು.

ತನ್ನ ಕುಟುಂಬದ ಸಲುವಾಗಿ ಚಾಪೆ ಮಾರಾಟ ಮಾಡುತ್ತಿದ್ದ ಅವರ ಬಳಿ ಚಿಕಿತ್ಸೆಗೂ ಹಣವಿಲ್ಲದಂತಾಗಿತ್ತು. ಈ ಬಗ್ಗೆ ತಿಳಿದ ಹೆಡ್ ಕಾನ್ಸಟೇಬಲ್‍ಯೊಬ್ಬರು ಪಿಎಸ್ಸೈಗೆ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಮುತುವರ್ಜಿ ವಹಿಸಿದ ಪಿಎಸ್ಸೈ ಅವರು ಚಿಕಿತ್ಸೆಗೆ ಹಣ ನೀಡುವ ಜೊತೆಗೆ ಬಾಡಿಗೆ ವಾಹನ ಮಾಡಿ ಆತನನ್ನು ತನ್ನ ಸ್ವಗ್ರಾಮಕ್ಕೆ ಕಳಿಸಿಕೊಟ್ಟಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News