ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಬೇಕು: ವಾಟಾಳ್ ನಾಗರಾಜ್

Update: 2020-10-08 16:48 GMT

ಕಲಬುರಗಿ, ಅ.8: ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚುತ್ತಿದೆ, ಅದನ್ನು ತಡೆಗಟ್ಟಲು ಸಿಎಂ ಯಡಿಯೂರಪ್ಪ ಅವರು ವಿಫಲರಾಗಿದ್ದಾರೆ. ಆದ್ದರಿಂದ ಯಡಿಯೂರಪ್ಪಗೆ ಗೌರವ ಇದ್ದರೆ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಕೊರೋನ ಕೈ ಬಿಟ್ಟು ಬಿಟ್ಟಿದ್ದಾರೆ. ಸಾಯುವವರು ಸಾಯಲಿ, ನಾನು ನನ್ನ ಪಾಡಿಗೆ ಆರಾಮಾಗಿ ಇರುತ್ತೇನೆ ಅನ್ನುವುದಾದರೆ ಅವರು ರಾಜೀನಾಮೆ ನೀಡಲಿ ಎಂದರು.

ರಾಜ್ಯದಲ್ಲಿ ಕೊರೋನ ಬಗ್ಗೆ ಮೊದಲಿದ್ದ ಭಯ ಮಾಯವಾಗಿದೆ. ಸರಕಾರಿ ಆಸ್ಪತ್ರೆಗಳು ಯಮಲೋಕ, ವೈದ್ಯರು ಯಮಧರ್ಮ, ಅವರನ್ನು ಕೇಳುವ ಆಗಿಲ್ಲ. ಇನ್ನು ಖಾಸಗಿ ಆಸ್ಪತ್ರೆಯವರು ಲೂಟಿಗಿಳಿದಿದ್ದಾರೆ ಇದೆಲ್ಲವನ್ನೂ ಯಾರು ತಡೆಯುವವರು ಎಂದು ಪ್ರಶ್ನಿಸಿದ್ದಾರೆ. 

ಇವತ್ತು ಚುನಾವಣೆ ಅಂದರೆನೇ ಭ್ರಷ್ಟಾಚಾರ ಆಗಿದೆ. ಎರಡು ಸಾವಿರ ಕೋಟಿ ಇದ್ದರೆ ಯಾರು ಬೇಕಾದರೂ ಸಿಎಂ ಆಗಬಹುದು, ಈ ವ್ಯವಸ್ಥೆ ನಿಲ್ಲಬೇಕು ಎಂದರು.

ಶಾಲೆ ತೆರೆಯುವ ಬಗ್ಗೆ ಮಾತನಾಡಿದ ಅವರು, ಸದ್ಯಕ್ಕೆ ಶಾಲಾ ಕಾಲೇಜು ಆರಂಭ ಬೇಡ. ಕೊರೋನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಮಕ್ಕಳಿಗೂ ಕೊರೋನ ಹರಡುವ ಸಾಧ್ಯತೆ ಇರುತ್ತೆ. ವಿದ್ಯೆ ಬೇಕು, ಆದರೆ ಪ್ರಾಣ ಅದಕ್ಕಿಂತ ಮುಖ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News