ಚಿಕ್ಕಮಗಳೂರು ಜಿಲ್ಲೆಗೆ ನೂತನ ಸಂಯುಕ್ತ ಖಾಝಿ ಆಯ್ಕೆ

Update: 2020-10-08 18:02 GMT

ಜಯಪುರ : ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯಾಗಿ ಝೈನುಲ್ ಉಲಮಾ ಶೈಖುನಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ರನ್ನು  ಆಯ್ಕೆ ಮಾಡಲಾಯಿತು.

ಬೇಕಲ್ ಉಸ್ತಾದ್ ನಿಧನದಿಂದ ಈ ಹುದ್ದೆ ತೆರವಾಗಿರುವ ಹಿನ್ನೆಲೆಯಲ್ಲಿ ನೂತನ ಆಯ್ಕೆ ನಡೆಸಲಾಯಿತು. ಜಯಪುರ ಜುಮಾ ಮಸೀದಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ 25ರಷ್ಟು ಮೊಹಲ್ಲಾಗಳ ಪ್ರತಿನಿಧಿಗಳು  ಭಾಗವಹಿಸಿದ್ದರು.

ಸಂಯುಕ್ತ ಜಮಾಅತ್ ಜಿಲ್ಲಾಧ್ಯಕ್ಷ ಯೂಸುಫ್ ಹಾಜಿ ಉಪ್ಪಳ್ಳಿ ಅಧ್ಯಕ್ಷತೆ ವಹಿಸಿದ್ದ ಸಭೆಯನ್ನು ಜಯಪುರ ಖತೀಬ್ ಹಾಗೂ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಖ್ ಮೊಂಟುಗೋಳಿ ಉದ್ಘಾಟಿಸಿದರು. ಶೃಂಗೇರಿ ಖತೀಬ್ ಉಸ್ಮಾನ್ ಮದನಿ ದುಆ ನಡೆಸಿದರು. ಉಪ್ಪಳ್ಳಿ ಖತೀಬ್ ಇಸ್ಮಾಈಲ್ ಸಅದಿ ಮಾಚಾರ್ ವಿಷಯ ಮಂಡಿಸಿದರು.

ಖಾಝಿ ಪದಗ್ರಹಣ ಸಮಾರಂಭದ ನಿರ್ವಹಣೆಗಾಗಿ ಅಬ್ದುಲ್ ಅಝೀಝ್ ಕರಾವಳಿ ಅಧ್ಯಕ್ಷತೆಯಲ್ಲಿ ಕೆಎಂ ಅಬೂಬಕರ್ ಸಿದ್ದೀಖ್ ಪ್ರಧಾನ ಕಾರ್ಯದರ್ಶಿ ಹಾಗೂ ಮಹ್ಯಿದ್ದೀನ್ ಕೊಪ್ಪ ಕೋಧಿಕಾರಿಗಳಾಗಿರುವ ಸ್ವಾಗತ ಸಮಿತಿಯನ್ನು ರೂಪಿಸಲಾಯಿತು. ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಸಖಾಫಿ ಶಾಂತಿಪುರ ಸ್ವಾಗತಿಸಿ, ಹುಸೈನ್ ಮುಸ್ಲಿಯಾರ್ ಉಪ್ಪಳ್ಳಿ ಮುಸ್ಲಿಯಾರ್ ಉಪ್ಪಳ್ಳಿ ಧನ್ಯವಾದವಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News