×
Ad

ಪ್ರಶ್ನೆ ಪತ್ರಿಕೆ ಅದಲು-ಬದಲು: ವಿದ್ಯಾರ್ಥಿಗಳು- ಶಿಕ್ಷಕರಲ್ಲಿ ಗೊಂದಲ

Update: 2020-10-09 20:33 IST
ಸಾಂದರ್ಭಿಕ ಚಿತ್ರ

ರಾಯಚೂರು, ಅ.9: ಗುಲ್ಬರ್ಗಾ ವಿ.ವಿಯ ಬಿ.ಎ ಅಂತಿಮ ವರ್ಷದ ಪ್ರಶ್ನೆ ಪತ್ರಿಕೆ ಅದಲು ಬದಲಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಗೊಂದಲ ಉಂಟಾಗಿತ್ತು. ಇದರಿಂದ ತಕ್ಷಣ ಎಚ್ಚೆತ್ತುಕೊಂಡ ವಿಶ್ವವಿದ್ಯಾಲಯದ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರು.

ಲಿಂಗಸುಗೂರಿನ ಒಳ ಬಳ್ಳಾರಿ ಚೆನ್ನಬಸವೇಶ್ವರ, ಎಸ್‍ಎಂಎಲ್‍ಬಿ ಪದವಿ ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಹಿಸ್ಟಾರಿಕಲ್ ಡೆವಲಪ್ಮೆಂಟ್ ಆಫ್ ಎಜ್ಯುಕೇಷನ್ ವಿಷಯದ ಬದಲು ಮೆಶರ್ಮೆಂಟ್ ಆ್ಯಂಡ್ ಇವ್ಯಾಲುವೇಷನ್ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು.

ಈ ಬಗ್ಗೆ ಕಾಲೇಜುಗಳ ಪ್ರಾಚಾರ್ಯರು ಹಾಗು ಉಪನ್ಯಾಸಕರು ಮೌಲ್ಯಮಾಪನ ಮತ್ತು ಉಪ ಕುಲಪತಿಗಳ ಗಮನ ಸೆಳೆಯಲು ತಾಸುಗಟ್ಟಲೆ ಪರದಾಡಿದ್ದರು. ಈ ಕುರಿತು ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ವಿವಿ ಅಧಿಕಾರಿಗಳು, ಬದಲಿ ಪ್ರಶ್ನೆಪತ್ರಿಕೆ ಕಳುಹಿಸಿ ತಡವಾದ ಸಮಯವನ್ನು ಮುಂದುವರಿಸಲು ಸೂಚಿಸಿದರು.

ಈ ಬಗ್ಗೆ ವಿಸಿಬಿ ಕಾಲೇಜು ಪ್ರಾಚಾರ್ಯ ಪಿ. ಜಗದೀಶ ಮಾತನಾಡಿ, ಪ್ರಶ್ನೆ ಪತ್ರಿಕೆ ಬದಲಾಗಿದ್ದು ನಿಜ. ಮೊಬೈಲ್ ಸಂಪರ್ಕ ವಿಳಂಬವಾಗಿ ಒಂದು ಗಂಟೆ ತಡವಾಗಿ ಪ್ರಶ್ನೆ ಪತ್ರಿಕೆ ಬಂದಿತ್ತು. ಹೀಗಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಮಯ ಮುಂದುವರಿಸಿ ಪರೀಕ್ಷೆ ನಡೆಸಲಾಯಿತು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News