ಶಾಸಕ ವಿಶ್ವನಾಥ್ ಆಪ್ತ ಕಾರ್ಯದರ್ಶಿ ಹೃದಯಾಘಾತದಿಂದ ಸಾವು

Update: 2020-10-11 12:21 GMT

ಬೆಂಗಳೂರು, ಅ. 11: ಶಾಸಕ ಮತ್ತು ಸಿ.ಎಂ. ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್ ಅವರ ಆಪ್ತ ಸಹಾಯಕ ಆಂಜಿನಪ್ಪ (55) ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಎಸ್. ಆರ್.ವಿಶ್ವನಾಥ್ ಕೊರೋನ ಹಿನ್ನೆಲೆ ತಪಾಸಣೆ ಮಾಡಿದಾಗ ಆಂಜಿನಪ್ಪ ಅವರಿಗೂ ಕೊರೋನ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಸೋಂಕಿನಿಂದ ಗುಣಮುಖರಾಗಿ ಹೊರ ಬಂದಿದ್ದರು.

ಆದರೆ, ಸೋಂಕಿನಿಂದ ಗುಣಮುಖರಾಗಿದ್ದ ಅಂಜಿನಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News