ರಾಜ್ಯದಲ್ಲಿ ಕೋವಿಡ್ ಅಟ್ಟಹಾಸಕ್ಕೆ ಬಲಿಯಾದವರ ಸಂಖ್ಯೆ 10 ಸಾವಿರಕ್ಕೆ ಏರಿಕೆ

Update: 2020-10-12 15:32 GMT

ಬೆಂಗಳೂರು, ಅ.12: ರಾಜ್ಯದಲ್ಲಿ ಸೋಮವಾರ 7,606 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 70 ಜನರು ಸೋಂಕಿಗೆ ಬಲಿಯಾಗಿದ್ದು, 12,030 ಜನರು ಗುಣಮುಖರಾಗಿದ್ದಾರೆ.

ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 7,17,915ಕ್ಕೆ ತಲುಪಿದ್ದು, 928 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 10,036ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 1,15,776ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

70 ಸೋಂಕಿತರು ಬಲಿ: ಬಾಗಲಕೋಟೆ 2, ಬಳ್ಳಾರಿ 2, ಬೆಳಗಾವಿ 2, ಬೆಂಗಳೂರು ನಗರ 18, ಚಾಮರಾಜನಗರ 1, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 2, ಚಿತ್ರದುರ್ಗ 2, ದಕ್ಷಿಣ ಕನ್ನಡ 4, ದಾವಣಗೆರೆ 2, ಧಾರವಾಡ 3, ಗದಗ 1, ಹಾಸನ 3, ಕೋಲಾರ 2, ಕೊಪ್ಪಳ 4,  ಮಂಡ್ಯ 2, ಮೈಸೂರು 7, ಶಿವಮೊಗ್ಗ 2, ತುಮಕೂರು 1, ಉಡುಪಿ 1, ಉತ್ತರ ಕನ್ನಡ 3, ವಿಜಯಪುರ 1, ಯಾದಗಿರಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.  

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 7,606 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 161, ಬಳ್ಳಾರಿ 142, ಬೆಳಗಾವಿ 444, ಬೆಂಗಳೂರು ಗ್ರಾಮಾಂತರ 113, ಬೆಂಗಳೂರು ನಗರ 3,498, ಬೀದರ್ 18, ಚಾಮರಾಜನಗರ 70, ಚಿಕ್ಕಬಳ್ಳಾಪುರ 128, ಚಿಕ್ಕಮಗಳೂರು 162, ಚಿತ್ರದುರ್ಗ 210, ದಕ್ಷಿಣ ಕನ್ನಡ 303, ದಾವಣಗೆರೆ 114, ಧಾರವಾಡ 109, ಗದಗ 26, ಹಾಸನ 278, ಹಾವೇರಿ 50, ಕಲಬುರಗಿ 127, ಕೊಡಗು 65, ಕೋಲಾರ 59, ಕೊಪ್ಪಳ 77, ಮಂಡ್ಯ 124, ಮೈಸೂರು 309, ರಾಯಚೂರು 43, ರಾಮನಗರ 53, ಶಿವಮೊಗ್ಗ 66, ತುಮಕೂರು 264, ಉಡುಪಿ 317, ಉತ್ತರ ಕನ್ನಡ 151, ವಿಜಯಪುರ 91, ಯಾದಗಿರಿ ಜಿಲ್ಲೆಯಲ್ಲಿ 34 ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News