ಗುಲಾಬಿ, ಈರುಳ್ಳಿಯನ್ನು ರಫ್ತು ಮಾಡಲು ಇಚ್ಛಿಸುವ ರಫ್ತುದಾರರಿಗೆ ಆಹ್ವಾನ
Update: 2020-10-16 18:02 GMT
ಬೆಂಗಳೂರು, ಅ. 16: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಇವರ ಆದೇಶದನ್ವಯ ತೋಟಗಾರಿಕೆ ಇಲಾಖೆ ನಿರ್ದೇಶಕರಿಂದ ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಬೆಳೆದ ಬೆಂಗಳೂರು ಗುಲಾಬಿ, ಈರುಳ್ಳಿಯನ್ನು ರಫ್ತು ಮಾಡಲು ಇಚ್ಛಿಸುವ ರಫ್ತುದಾರರನ್ನು ಆಹ್ವಾನಿಸಲಾಗಿದೆ.
ಈ ಪ್ರಾದೇಶಿಕ ವೈಶಿಷ್ಟ್ಯವುಳ್ಳ ಉತ್ಪನ್ನವನ್ನು ಚೆನ್ನೈ ಬಂದರಿನಿಂದ ಮಾತ್ರ ಡಿಜಿಎಫ್ಟಿ ಅಧಿಸೂಚನೆ ಹೊರಡಿಸಿದ ರಫ್ತು ನೀತಿಯ ಮಾನದಂಡಗಳ ಪ್ರಕಾರ ರಫ್ತು ಮಾಡಲು ಅನುಮತಿಸಲಾಗುವುದು. ಆಸಕ್ತ ಮತ್ತು ಪರವಾನಿಗೆ ಹೊಂದಿರುವ ರಫ್ತುದಾರರು ಕೆವೈಸಿ ವಿವರಗಳೊಂದಿಗೆ ಮತ್ತು ನಿಯಮಾನಸಾರ ತಮ್ಮ ಕೋರಿಕೆಯನ್ನು ಲೆಟರ್ ಆಫ್ ಕ್ರೆಡಿಟ್ ಜೊತೆಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ: 080-26573391 ಮತ್ತು www.horticulturedir.karnataka.gov.in ವೆಬ್ಸೈಟ್ನಲ್ಲಿ ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ಕೋರಿದೆ.