ಪಂಡಿತ್ ವಿನಾಯಕ ತೊರವಿ ಅವರಿಗೆ `ಸಂಗೀತ ವಿದ್ವಾನ್' ಪ್ರಶಸ್ತಿ

Update: 2020-10-16 18:22 GMT

ಬೆಂಗಳೂರು, ಅ. 16: 2020-21ನೆ ಸಾಲಿನ ಸಂಗೀತ ವಿಭಾಗದ `ರಾಜ್ಯ ಸಂಗೀತ ವಿದ್ವಾನ್' ಪ್ರಶಸ್ತಿಗೆ ಪಂಡಿತ್ ವಿನಾಯಕ ತೊರವಿ, ಧಾರವಾಡ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯನ್ನು ಅ.17ರ ಸಂಜೆ 6 ಗಂಟೆಗೆ ಮೈಸೂರು ದಸರಾ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಪ್ರಶಸ್ತಿಯು 5ಲಕ್ಷ ರೂ.ನಗದು, ಫಲತಾಂಬೂಲ, ಪ್ರಶಸ್ತಿ ಫಲಕ, ಸರಸ್ವತಿ ವಿಗ್ರಹ, ಶಾಲು ಹಾರ, ಪೇಟ ಇವರುಗಳನ್ನು ಒಳಗೊಂಡಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News