ವಿಮಾನ ನಿಲ್ದಾಣದಲ್ಲಿ ನಲವತ್ತೈದು ನಿಮಿಷ ಕಾದ ಸಿದ್ದರಾಮಯ್ಯ

Update: 2020-10-19 15:10 GMT

ಬೆಳಗಾವಿ, ಅ. 19: ವಿಧಾನಸಭೆಯ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ಸುಲಿನ್ ಇಂಜೆಕ್ಷನ್‍ಗಾಗಿ ಇಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುಮಾರು ನಲವತ್ತೈದು ನಿಮಿಷಗಳಷ್ಟು ಕಾಲ ಕಾದ ಘಟನೆ ನಡೆಯಿತು.

ಸೋಮವಾರ ಬೆಳಗ್ಗೆ ಬೆಂಗಳೂರಿನಿಂದ ಬಾಗಲಕೋಟೆ ಜಿಲ್ಲೆ ಪ್ರವಾಸ ಕೈಗೊಳ್ಳಲು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಉಪಾಹಾರ ಸೇವಿಸಿದ ನಂತರ ಅವರ ಸಹಾಯಕರನ್ನು ಇನ್ಸುಲಿನ್ ನೀಡುವಂತೆ ಕೇಳಿದ್ದಾರೆ. ಆದರೆ, ಇನ್ಸುಲೆನ್ ಇಂಜೆಕ್ಷನ್ ಮರೆತು ಬಂದಿರುವುದು ಗೊತ್ತಾಗಿದೆ. ಹೀಗಾಗಿ ಸಿದ್ದರಾಮಯ್ಯ ಇನ್ಸುಲಿನ್‍ಗಾಗಿ ಅಲ್ಲೆ ಕಾದಿದ್ದಾರೆ.

ಆ ಬಳಿಕ ಮಾಜಿ ಶಾಸಕ ಮುಖಂಡ ಅಶೋಕ ಪಟ್ಟಣ್ ತಮ್ಮ ಕಾರು ಚಾಲಕರನ್ನು ಬೆಳಗಾವಿಗೆ ಕಳುಹಿಸಿ ಇನ್ಸುಲಿನ್ ಇಂಜೆಕ್ಷನ್ ತರಿಸಿದ್ದು, ಅದನ್ನು ತೆಗೆದುಕೊಂಡ ಬಳಿಕ ಸಿದ್ದರಾಮಯ್ಯನವರು ಬಾಗಲಕೋಟೆ ಜಿಲ್ಲೆಯತ್ತ ತೆರಳಿದರು ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News