ಸಾಹಿತ್ಯ ಪ್ರಕಾಶನಕ್ಕೆ ಅಂಕಿತ ಪುಸ್ತಕ ದತ್ತಿ ಪ್ರಶಸ್ತಿ

Update: 2020-10-19 16:22 GMT

ಬೆಂಗಳೂರು, ಅ.19: ಪ್ರಸಕ್ತ ಸಾಲಿನ ಅಂಕಿತ ದತ್ತಿ ಪ್ರಶಸ್ತಿಗೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಸಂಸ್ಥೆಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್ ನೇತೃತ್ವದಲ್ಲಿ ಸೋಮವಾರ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನವನ್ನು ಅಂಕಿತ ಪುಸ್ತಕ ದತ್ತಿ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಅಂಕಿತ ಪುಸ್ತಕ ದತ್ತಿ ಪ್ರಶಸ್ತಿಯು 35 ಸಾವಿರ ರೂ. ನಗದು ಪುರಸ್ಕಾರವನ್ನೊಳಗೊಂಡಿದ್ದು, ನವೆಂಬರ್ 4ರಂದು ಸಂಜೆ 4ಕ್ಕೆ ಪ್ರಶಸ್ತಿ ಫಲಕ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಅಂಕಿತ ಪುಸ್ತಕ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿ ದಾನಿ ಪ್ರಕಾಶ್ ಕಂಬತ್ತಳ್ಳಿ, ಗೌರವ ಕಾರ್ಯದರ್ಶಿಗಳಾದ ಡಾ. ರಾಜಶೇಖರ ಹತಗುಂದಿ, ವ.ಚ ಚನ್ನೇಗೌಡ, ಪ್ರಕಟನಾ ಸಮಿತಿಯ ಸಂಚಾಲಕ ಡಾ. ಪದ್ಮರಾಜ ದಂಡಾವತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News