ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪಿಡಿಓ

Update: 2020-10-22 12:06 GMT

ದಾವಣಗೆರೆ, ಅ.22: ಇ-ಸೊತ್ತು ಕೊಡಲು ಎರಡು ಸಾವಿರ ಲಂಚ ಪಡೆಯುತ್ತಿದ್ದ ಪಿಡಿಓಯೊಬ್ಬರು ಎಸಿಬಿ ಬಲೆಗೆ ಗುರುವಾರ ಬಿದ್ದಿದ್ದಾರೆ.

ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮ ಪಂಚಾಯತ್ ಪಿಡಿಓ ಹನಮಂತಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇ-ಸೊತ್ತು ಕೊಡಲು ರಂಗನಾಥ ಎಂಬುವವರ ಬಳಿ ಪಿಡಿಓ ಅವರು ಎರಡು ಸಾವಿರ ರೂ.ಗೆ ಬೇಡಿಕೆಯಟ್ಟಿದ್ದರು. ಇದನ್ನು ಅವರು ಎಸಿಬಿ ಅವರ ಗಮನಕ್ಕೆ ತಂದಿದ್ದಾರೆ. ಗ್ರಾಮ ಪಂಚಾಯತ್‍ನಲ್ಲಿ ರಂಗನಾಥ ಅವರಿಂದ ಲಂಚಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ.  

ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News