ವಿದ್ಯುತ್ ಸ್ಪರ್ಶಿಸಿ ರೈತ ಸಾವು
Update: 2020-10-22 18:01 GMT
ಪಾಂಡವಪುರ, ಅ.21: ತೋಟಕ್ಕೆ ನೀರು ಹಾಯಿಸುವ ವೇಳೆ ವಿದ್ಯುತ್ ಸ್ಪರ್ಶವಾಗಿ ರೈತ ಸಾವನ್ನಪ್ಪಿದ ಘಟನೆ ತಾಲೂಕಿನ ಶಂಕನಹಳ್ಳಿ ಗ್ರಾಮದ ಸಮೀಪ ನಡೆದಿದೆ.
ಕೆರೆತೊಣ್ಣೂರು ಗ್ರಾಮದ ದಿವಂಗತ ಕೃಷ್ಣೇಗೌಡ ಅವರ ಮಗ ಟಿ.ಕೆ.ಅನಂತ(42) ಸಾವನ್ನಪ್ಪಿದ ರೈತರಾಗಿದ್ದಾರೆ.
ಅನಂತ ಅವರು ಬುಧವಾರ ಮಧ್ಯಾಹ್ನ ಪರಂಗಿ ತೋಟಕ್ಕೆ ನೀರು ಹಾಯಿಸಲು ಮೋಟರ್ ಸ್ವಿಚ್ ಆನ್ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ನಡೆದಿದ್ದು, ಕೂಡಲೇ ಪಾಂಡವಪುರದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆ ವೇಳೆಗೆ ಮೃತಪಟ್ಟಿದ್ದರು.
ಮೃತ ಅನಂತ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.