ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಕಾಂಗ್ರೆಸ್

Update: 2020-10-25 16:46 GMT

ಬೆಂಗಳೂರು, ಅ.25: ''ಗೊಬ್ಬರ ಕೇಳಿದ ರೈತರನ್ನ ಗುಂಡಿಕ್ಕಿದಿರಿ, ಸಾಲ ಮನ್ನಾ ಮಾಡಲು ನೋಟ್ ಪ್ರಿಂಟಿಂಗ್ ಮಷಿನ್ ಇಟ್ಟಿಲ್ಲ ಎಂದಿರಿ, ನೆರೆಯಲ್ಲಿ, ಲಾಕ್‍ಡೌನ್‍ನಲ್ಲಿ ನಷ್ಟ ಅನುಭವಿಸಿದ ರೈತರ ನೆರವಿಗೆ ನಿಲ್ಲದೆ ಹೋದಿರಿ. ಬಿಜೆಪಿಯವರಿಗೆ ಸಾಲಮನ್ನಾ ಹಾಗೂ ಹಲವು ರೈತಪರ ಯೋಜನೆಗಳನ್ನು ನೀಡಿದ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ'' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

ಸಾರ್ವಜನಿಕ ಸ್ವಾಮ್ಯದ ಬಹುತೇಕ ಎಲ್ಲ ಕ್ಷೇತ್ರದ ಸಂಸ್ಥೆಗಳನ್ನೂ ನರೇಂದ್ರಮೋದಿ ತಮ್ಮ ಉದ್ಯಮಿ ಸ್ನೇಹಿತರ ಜೋಳಿಗೆಗೆ ಸುರಿದು, ಸಾಲದೆಂಬಂತೆ ಈಗ ಕೃಷಿ ಕ್ಷೇತ್ರವನ್ನೂ, ರೈತರ ಸ್ವಾಭಿಮಾನದ ಬದುಕನ್ನು ಉದ್ಯಮಿಗಳ ಹಿತಕ್ಕೆ ಬಲಿಕೊಡಲು ಮುಂದಾಗಿದ್ದಾರೆ. ಈ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರ ವಿರೋಧವಿದ್ದರೂ ನಿಮ್ಮ ಸಮರ್ಥನೆ ಭಂಡತನದ್ದು ಎಂದು ಕಾಂಗ್ರೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News