ರಾಜ್ಯದಲ್ಲಿ ಹೊಸದಾಗಿ 3,130 ಕೊರೋನ ಪ್ರಕರಣ ದೃಢ, 42 ಸಾವು

Update: 2020-10-26 14:56 GMT

ಬೆಂಗಳೂರು, ಅ.26: ರಾಜ್ಯದಲ್ಲಿ ಸೋಮವಾರ 3,130 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 42 ಜನರು ಸೋಂಕಿಗೆ ಬಲಿಯಾಗಿದ್ದು, 8,715 ಜನರು ಗುಣಮುಖರಾಗಿದ್ದಾರೆ. ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 8,05,947ಕ್ಕೆ ತಲುಪಿದ್ದು, 942 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 10,947ಕ್ಕೆ ತಲುಪಿದ್ದು, ಸೋಮವಾರ ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 75,423ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. 

42 ಸೋಂಕಿತರು ಬಲಿ: ಬಳ್ಳಾರಿ 2, ಬೆಂಗಳೂರು ನಗರ 20, ದಕ್ಷಿಣ ಕನ್ನಡ 4, ದಾವಣಗೆರೆ 1, ಧಾರವಾಡ 3, ಹಾಸನ 1, ಕೊಡಗು 1, ಕೋಲಾರ 1, ಮಂಡ್ಯ 1, ಮೈಸೂರು 2, ರಾಮನಗರ 1, ಶಿವಮೊಗ್ಗ 1, ತುಮಕೂರು 1, ಉಡುಪಿ 1, ಉತ್ತರ ಕನ್ನಡ 1, ಯಾದಗಿರಿ  ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.   

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 3,130 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 51, ಬಳ್ಳಾರಿ 47, ಬೆಳಗಾವಿ 24, ಬೆಂಗಳೂರು ಗ್ರಾಮಾಂತರ 87, ಬೆಂಗಳೂರು ನಗರ 1,603, ಬೀದರ್ 3, ಚಾಮರಾಜನಗರ 26, ಚಿಕ್ಕಬಳ್ಳಾಪುರ 56, ಚಿಕ್ಕಮಗಳೂರು 43, ಚಿತ್ರದುರ್ಗ 86, ದಕ್ಷಿಣ ಕನ್ನಡ 153, ದಾವಣಗೆರೆ 124, ಧಾರವಾಡ 44, ಗದಗ 4, ಹಾಸನ 98, ಹಾವೇರಿ 39, ಕಲಬುರಗಿ 37, ಕೊಡಗು 39, ಕೋಲಾರ 75, ಕೊಪ್ಪಳ 22, ಮಂಡ್ಯ 56, ಮೈಸೂರು 139, ರಾಯಚೂರು 37, ರಾಮನಗರ 10, ಶಿವಮೊಗ್ಗ 3, ತುಮಕೂರು 57, ಉಡುಪಿ 44, ಉತ್ತರ ಕನ್ನಡ 51, ವಿಜಯಪುರ 63, ಯಾದಗಿರಿ ಜಿಲ್ಲೆಯಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News