ಪಿಡಿಪಿಗೆ ಮೂವರು ನಾಯಕರು ರಾಜೀನಾಮೆ
Update: 2020-10-26 18:51 GMT
ಹೊಸದಿಲ್ಲಿ, ಅ. 26: ಮೆಹಬೂಬಾ ಮುಫ್ತಿ ಅವರ ಪಿಡಿಪಿಗೆ ಮೂವರು ನಾಯಕರು ರಾಜೀನಾಮೆ ನೀಡಿದ್ದಾರೆ. ಮೆಹಬೂಬ ಮುಫ್ತಿ ಅವರ ಹೇಳಿಕೆ ತಮ್ಮ ದೇಶ ಭಕ್ತಿಯ ಭಾವನೆಗೆ ಘಸಿ ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
ಪಿಡಿಪಿ ನಾಯಕರಾದ ಟಿ.ಎಸ್. ಬಜ್ವಾ, ವೇದ್ ಮಹಾಜನ್ ಹಾಗೂ ಹುಸೈನ್ ಎ. ವಫ್ಫಾ ತಮ್ಮ ರಾಜೀನಾಮೆ ಪತ್ರವನ್ನು ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಅವರ ಕೆಲವು ವರ್ತನೆಗಳು ಹಾಗೂ ಅನಪೇಕ್ಷಿತ ಮಾತುಗಳು ಮುಖ್ಯವಾಗಿ ರಾಷ್ಟ್ರ ಭಕ್ತಿಗೆ ಘಾಸಿ ಉಂಟು ಮಾಡುವ ಮಾತುಗಳಿಂದ ಅಹಿತಕರ ಭಾವನೆ ಉಂಟಾಗಿದೆ ಎಂದು ಮೂವರು ನಾಯಕರು ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಅಕ್ಟೋಬರ್ 23ರಂದು ಮೆಹಬೂಬಾ ಮುಫ್ತಿ, ರಾಜ್ಯ ಧ್ವಜವನ್ನು ಮತ್ತೆ ತರಲಾಗುವುದು ಹಾಗೂ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನ ಮಾನವನ್ನು ಮರು ಸ್ಥಾಪಿಸುವ ಹೋರಾಟವನ್ನು ಕೈಬಿಡಲಾರೆವು ಎಂದು ಹೇಳಿದ್ದರು.