ಕುರುಕ್ಷೇತ್ರ ಚಿತ್ರದ ಬಳಿಕ ನನ್ನ ಮುನಿರತ್ನ ಸಂಬಂಧ ಮುಗಿಯಿತು: ನಿಖಿಲ್ ಕುಮಾರಸ್ವಾಮಿ

Update: 2020-10-27 18:07 GMT

ಬೆಂಗಳೂರು, ಅ.26: ನಾನು ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತ. ನನ್ನ ವೈಯಕ್ತಿಕ ಕಾರಣಕ್ಕೆ ನಾನು ಪಕ್ಷದ ಕಾರ್ಯಕರ್ತರಿಗೆ ವಿಷ ಹಾಕುವ ಕೆಲಸ ಎಂದು ಮಾಡುವುದಿಲ್ಲ ಎಂದು ಜೆಡಿಎಸ್‍ನ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿಂದು ಮಾತನಾಡಿದ ಅವರು, ಆರ್.ಆರ್‍ನಗರ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ನನಗೆ ಸಹೋದರ ಸಮಾನ, ಅವರು ಕುಮಾರಸ್ವಾಮಿ ಅವರನ್ನ ತಂದೆಯ ಸ್ಥಾನದಲ್ಲಿ ನೋಡುತ್ತಿದ್ದಾರೆ. ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಎರಡು ರಾಷ್ಟ್ರೀಯ ಪಕ್ಷಗಳು ಆಡಳಿತದಲ್ಲಿ ವಿಫಲವಾಗಿವೆ. ಕಳಪೆ ಕಾಮಗಾರಿ ಮಾಡಿ ಅದೇ ಹಣದಿಂದ ಚುನಾವಣೆ ಮಾಡುತ್ತಿದ್ದಾರೆ. ಯುವಕರಿಗೆ ಎಲ್ಲವೂ ಅರ್ಥ ಆಗುತ್ತದೆ. ಯುವಕರು ಈ ಕ್ಷೇತ್ರದಲ್ಲಿ ಸೂಕ್ತ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ನಾನೊಬ್ಬ ನಟ, ಮುನಿರತ್ನ ನಿರ್ಮಾಪಕರು. ಕುರುಕ್ಷೇತ್ರ ಚಿತ್ರದಲ್ಲಿ ನನಗೊಂದು ಪಾತ್ರ ಕೊಟ್ಟಿದ್ದರು. ಆ ಪಾತ್ರವನ್ನು ನಾನು ಮಾಡಿದ್ದೇನೆ. ಕುರುಕ್ಷೇತ್ರ ಚಿತ್ರ ಮುಗಿಯುತ್ತಿದ್ದಂತೆ ನನ್ನ ಅವರ ಸಂಬಂಧ ಮುಗಿಯಿತು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News