ತಂದೆಯ ಅಸ್ಥಿ ಬಿಡಲು ಹೋದ ಮಗ ನೀರಿನಲ್ಲಿ ಮುಳುಗಿ ಮೃತ್ಯು

Update: 2020-10-28 14:18 GMT

ಬಾಗಲಕೋಟೆ, ಅ.28: ತಂದೆಯ ಅಸ್ಥಿಯನ್ನು ಬಿಡಲು ಹೋಗಿದ್ದ ಮಗ ನೀರುಪಾಲಾಗಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಚೋಳಚಗುಡ್ಡ ಬಳಿಯ ಮಲಪ್ರಭಾ ನದಿಯಲ್ಲಿ ನಡೆದಿದೆ.

ಗದಗ ಜಿಲ್ಲೆಯ ಗಜೇಂದ್ರಗಢ ನಿವಾಸಿ ಮಹಾಂತೇಶ್ ಬಿ ಯಾದವ್(45) ನೀರು ಪಾಲಾದ ವ್ಯಕ್ತಿ. ಮಹಾಂತೇಶ್ ಹನ್ನೊಂದು ದಿನದ ಕಾರ್ಯ ಹಿನ್ನೆಲೆಯಲ್ಲಿ ತಮ್ಮ ತಂದೆ ಭೀಮಣ್ಣ ಯಾದವ್ ಅವರ ಅಸ್ಥಿ ಬಿಡಲು ಸಹೋದರರ ಜೊತೆ ಬಂದಿದ್ದರು.

ಹೀಗಾಗಿ ಮಲಪ್ರಭಾ ನದಿಗೆ ಇಳಿದಿದ್ದರು. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬಾದಾಮಿ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಾಗರಾಳ ಎಸ್.ಪಿ ಗ್ರಾಮದ ಬಳಿ ಮಹಾಂತೇಶ ಶವವನ್ನು ಹೊರ ತೆಗೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News