ಪ್ರವಾದಿ ಮುಹಮ್ಮದರ ಜೀವನ ಸದ್ಗುಣಗಳ ಸ್ಫೂರ್ತಿದಾಯಕ ಕಥೆ: ರಾಜ್ಯಪಾಲ ವಜುಭಾಯಿ ವಾಲಾ
Update: 2020-10-29 12:46 GMT
ಬೆಂಗಳೂರು, ಅ.29: ಪ್ರವಾದಿ ಮುಹಮ್ಮದ್(ಸ) ಅವರ ಜನ್ಮದಿನದ ಈ ಶುಭ ಸಂದರ್ಭದಲ್ಲಿ ನಾನು ಎಲ್ಲ ಮುಸ್ಲಿಮ್ ಬಾಂಧವರಿಗೆ ಮೀಲಾದುನ್ನಬಿ ಹಬ್ಬಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್(ಸ) ಅವರ ಜೀವನವು ಮಾನವ ಕುಲದ ಪ್ರೀತಿ, ಸಹೋದರತ್ವ ಮತ್ತು ಮಾನವ ಕುಲದ ಸದ್ಗುಣಗಳ ಸ್ಪೂರ್ತಿದಾಯಕ ಕಥೆಯಾಗಿದೆ. ನಾವು ನಮ್ಮ ಸಹವರ್ತಿಗಳೊಂದಿಗೆ ನಂಬಿಕೆ, ಕಾಳಜಿ ಮತ್ತು ಸಹಾನುಭೂತಿಯಿಂದ ವರ್ತಿಸಿದಾಗ ಮಾತ್ರ ಪ್ರವಾದಿಯ ಧ್ಯೇಯವು ನೆರವೇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್(ಸ) ಅವರ ಜನ್ಮದಿನವು ವಿಶ್ವದ ಪ್ರತಿಯೊಬ್ಬರಲ್ಲಿಯೂ ಶಾಂತಿ ಮತ್ತು ಅಭಿಮಾನವನ್ನು ಬೆಳೆಸಲಿ ಎಂದು ರಾಜ್ಯಪಾಲ ವಜುಭಾಯಿ ವಾಲಾ ಪ್ರಾರ್ಥಿಸಿದ್ದಾರೆ.