ಮುಂದುವರಿದ ಹಗಲು ದರೋಡೆ: 3 ಮನೆಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2020-10-29 16:05 GMT

ಶಿವಮೊಗ್ಗ: ಸಾಗರದ ತುಮರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರು ಮನೆಗಳಲ್ಲಿ ಹಗಲು ದರೋಡೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚುಟ್ಟಿಕೆರೆ ಸಂಜೀವ, ತುಮರಿ ಟೈಲರ್ ಲಕ್ಷ್ಮಣ‌ ಹಾಗೂ ಬ್ರಾಹ್ಮಣ ಕೆಪ್ಪಿಗೆ ಚಕ್ಕೋಡು ರಾಜು ಎಂಬುವವರ‌ ಮನೆಯಲ್ಲಿ ಕಳ್ಳತನ ನಡೆದಿದೆ.

ಮೂರು ಮನೆಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಆಗಿದೆ ಎನ್ನಲಾಗಿದೆ. ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮನೆಯಲ್ಲಿ ಚಿನ್ನಾಭರಣ ದೋಚುವಾಗ ಮನೆಯಲ್ಲಿ ಯಾರು ಇರಲಿಲ್ಲ ಎಂಬುದು ತಿಳಿದಿದ್ದು, ಒಂದು ಮನೆಯ ಸದಸ್ಯರು ಮದುವೆಗೆಂದು ತೆರಳಿದ್ದರು‌ ಎನ್ನಲಾಗಿದೆ. ಉಳಿದ‌ವರ ಮನೆಗಳ ವಿವರ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News