ಮುನಿರತ್ನ ಪರ ಪ್ರಚಾರದಿಂದ ನಟ ದರ್ಶನ್ ವ್ಯಕ್ತಿತ್ವಕ್ಕೆ ಧಕ್ಕೆ: ಬಡಗಲಪುರ ನಾಗೇಂದ್ರ
Update: 2020-10-30 18:20 GMT
ಮೈಸೂರು, ಅ,30: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಮುನಿರತ್ನ ಪರ ಚುನಾವಣಾ ಪ್ರಚಾರ ಕೈಗೊಂಡಿರುವ ನಟ ದರ್ಶನ್ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಿಸಿದರು.
ನಟ ದರ್ಶನ್ ನಮ್ಮ ಜಿಲ್ಲಯ ಹುಡುಗ. ಅವರ ಮೇಲೆ ಅಪಾರವಾದ ಪ್ರೀತಿ ಇದೆ. ಅವರು ಇಂತಹ ನಿಲುವು ತೆಗೆದು ಕೊಂಡಿರುವುದ ಸರಿಯಲ್ಲ. ಮುನಿರತ್ನ ಮತ್ತು ಇವರಿಗೆ ವೈಯಕ್ತಿಕ ಸಂಬಂದ ಏನೇ ಇರಬಹುದು. ಆದರೆ ರೈತ ವಿರೋಧಿ ನಿಲುವು ತಳೆದಿರುವ ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ಹೋಗಿರುವುದು ಇವರ ಇಮೇಜ್ಗೆ ಧಕ್ಕೆ ಉಂಟಾಗಲಿದೆ ಎಂದು ಹೇಳಿದರು.
ನಟ ದರ್ಶನ್ ರೈತರ ಪರ ಇರಬೇಕು, ಯಾವುದೋ ರಾಜಕೀಯ ಪಕ್ಷದ ಪರ ಅಲ್ಲ, ಅವರು ಬಿಜೆಪಿ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಬಹುದು. ಆದರೆ ಮುನಿರತ್ನ ನಿಂತಿರುವುದು ಯಾವ ಪಕ್ಷದಿಂದ. ಹಾಗಾಗಿ ಅವರು ಚುನಾವಣಾ ಪ್ರಚಾರದಿಂದ ಹಿಂದೆ ಸರಿದು ಬಿಜೆಪಿ ಪಕ್ಷದ ರೈತ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಬೇಕು ಎಂದು ಹೇಳಿದರು.