ಪತ್ರಕರ್ತ ಕೆ.ಪಿ.ನಾಗರಾಜ್ ಸೇರಿ 10 ಮಂದಿಗೆ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Update: 2020-10-31 16:03 GMT
ಕೆ.ಪಿ.ನಾಗರಾಜ್

ಮೈಸೂರು,ಅ.31: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಮಂದಿಗೆ ಜಿಲ್ಲಾಡಳಿತವು ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.

ಮಾಧ್ಯಮ ಕ್ಷೇತ್ರದಲ್ಲಿ ಕೆ.ಪಿ.ನಾಗರಾಜು, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಗುಬ್ಬಿಗೂಡು ರಮೇಶ್, ಸಮಾಜ ಸೇವೆ ಕ್ಷೇತ್ರದಲ್ಲಿ ಕೆ.ಜೆ.ಶಂಕರನಾರಾಯಣ ಶಾಸ್ತ್ರಿ, ಜಾನಪದ ಕ್ಷೇತ್ರದಲ್ಲಿ ಭಾಗ್ಯಮ್ಮ, ಕಲೆ, ಸಂಗೀತ ಕ್ಷೇತ್ರದಲ್ಲಿ ರೇವಣ್ಣ, ವಿಶಿಷ್ಟಸೇವೆ, ಪರಿಸರ ಕ್ಷೇತ್ರದಲ್ಲಿ ನಾಗಭೂಷಣ್ ರಾವ್(ಪ್ಯಾಲೇಸ್ ಬಾಬು), ಕನ್ನಡ ಹೋರಾಟಕ್ಕೆ ಸಿದ್ದರಾಜು, ಡಿ.ಆರ್.ಕರೀಗೌಡ, ಡಿ.ಎಂ.ಬಸವಣ್ಣ, ಡಾ.ಎಂ.ಬಿ.ಮಂಜೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News