2020ನೆ `ವಿಭಾ ಸಾಹಿತ್ಯ ಪ್ರಶಸ್ತಿ'ಗೆ ಕವಯಿತ್ರಿ ದೀಪ್ತಿ ಭದ್ರಾವತಿ ಆಯ್ಕೆ

Update: 2020-11-08 14:34 GMT

ಬೆಂಗಳೂರು, ನ. 8: 2020ನೆ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕವಯಿತ್ರಿ ದೀಪ್ತಿ ಭದ್ರಾವತಿ ಆಯ್ಕೆಯಾಗಿದ್ದು, ಅವರ `ಅಷ್ಟೇ' ಹಸ್ತಪ್ರತಿ ಕವನ ಸಂಕಲಕ್ಕೆ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿಯು 10 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿಯ ಅಂತಿಮ ಸುತ್ತಿನ ತೀರ್ಪುಗಾರರಾಗಿ ಹಿರಿಯ ಕವಿಗಳಾದ ಮಮತಾ ಸಾಗರ ಮತ್ತು ಜಿ.ಪಿ.ಬಸವರಾಜ ಕಾರ್ಯನಿರ್ವಹಿಸಿದ್ದರು.

ಈ ವರ್ಷದ ಪ್ರಶಸ್ತಿಗೆ 190 ಹಸ್ತಪ್ರತಿ ಬಂದಿದ್ದವು. ಅಂತಿಮ ಸುತ್ತಿನಲ್ಲಿ 10 ಹಸ್ತ ಪ್ರತಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಕವಯಿತ್ರಿ ದೀಪ್ತಿ ಭದ್ರಾವತಿರವರ ಹಸ್ತಪ್ರತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ. ವಿಭಾ ಸಾಹಿತ್ಯ ಸ್ಪರ್ಧೆಯ ಸಂಚಾಲಕರಾಗಿ ಸುನಂದಾ ಕಡಮೆ ಹಾಗೂ ಪ್ರಕಾಶ ಕಡಮೆ ಕಾರ್ಯನಿರ್ವಹಿಸಿದ್ದರೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News