ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ ಎಚ್.ಕೆ.ಪಾಟೀಲ್

Update: 2020-11-15 13:03 GMT

ಧಾರವಾಡ ನ. 15: ಜಿ.ಪಂ. ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಹಿನ್ನೆಲೆ ಅವರ ನಿವಾಸಕ್ಕೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ರವಿವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಬಂಧಿಸಿರುವುದು ರಾಜಕೀಯ ಒತ್ತಡ ಹೇರುವ ಕ್ರಮ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂಥ ಘಟನೆಗಳು ನಡೆದಿವೆ. ಇದು ಅತ್ಯಂತ ನೋವು ನೀಡುವ ವಿಷಯ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಬಿಜೆಪಿ ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತಿದೆ. ಇದನ್ನು ಹಲವಾರು ಕಡೆ ನೋಡಿದ್ದೇವೆ, ಇದನ್ನು ದೇಶವೇ ಗಮನಿಸುತ್ತಿದೆ. ರಾಜಕೀಯದಲ್ಲಿ ಭಯ ಹುಟ್ಟಿಸೋ ಕೆಲಸ ಮಾಡಬಾರದು, ಇದು ಪ್ರಜಾಪ್ರಭುತ್ವ ವ್ಯವಸ್ಥೆ, ಅದನ್ನು ಅಶಕ್ತಗೊಳಿಸೋ ಕೆಲಸ ಮಾಡಬಾರದು ಎಂದರು.

ಕಾನೂನಿನ ಮುಂದೆ ಎಲ್ಲರೂ ಸಮಾನರೇ ಆದರೆ, ಅನ್ಯಾಯವಾಗಿ ಯಾರಿಗೂ ತೊಂದರೆ ಕೊಡಬಾರದು. ಈ ಪರಿಪಾಠ ಸಂವಿಧಾನದಲ್ಲಿಯೇ ಇದೆ. ಬಿಜೆಪಿಯ ಕ್ರಮವನ್ನು ಯಾರೂ ಮೆಚ್ಚುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News