ಹೋರಿ ಹಬ್ಬದ ವೇಳೆ ಹೋರಿ ತಿವಿದು ಯುವಕ ಮೃತ್ಯು

Update: 2020-11-24 16:01 GMT

ಹಾವೇರಿ, ನ.24: ಹೋರಿ ಹಿಡಿಯಲು ಹೋದ ಯುವಕನೊಬ್ಬ ಹೋರಿಯ ತಿವಿತದಿಂದ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮೃತನನ್ನು ರಾಣೆಬೆನ್ನೂರು ತಾಲೂಕು ಅಸುಂಡಿ ಗ್ರಾಮದ ಚಂದ್ರು ಈರಕ್ಕನವರ (20) ಎಂದು ಗುರುತಿಸಲಾಗಿದೆ.

ನಿಷೇಧವಿದ್ದರೂ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಹೋರಿ ಹಬ್ಬ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News