ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿರುವುದು ಅಕ್ಷಮ್ಯ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

Update: 2020-11-27 16:08 GMT

ಬೆಂಗಳೂರು, ನ.27: ನಮ್ಮದೇ ರೈತರೊಂದಿಗೆ ಸಂವಾದಿಸಲು ತಯಾರಿಲ್ಲದೆ ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿರುವುದು ಅಕ್ಷಮ್ಯ ಎಂದು ರಾಜ್ಯ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದೆ.

ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ಪಾಕಿಸ್ತಾನದ ಐಎಸ್‍ಐ ಅನ್ನು ಪಠಾಣ್ ಕೋಟ್‍ಗೆ ಆಹ್ವಾನಿಸಿ, ಆದರದ ಸ್ವಾಗತ ಕೋರಿದ್ದ ನರೇಂದ್ರ ಮೋದಿ ಸರಕಾರ, ನಮ್ಮದೇ ರೈತರೊಂದಿಗೆ ಸಂವಾದಿಸಲು ತಯಾರಿಲ್ಲದೆ, ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿರುವುದು ಅಕ್ಷಮ್ಯ. ನರೇಂದ್ರ ಮೋದಿಯವರ ಪ್ರಾಧಾನ್ಯತೆ, ಪ್ರಾಮುಖ್ಯತೆ ಯಾರಿಗೆ ಹಾಗೂ ಯಾವುದಕ್ಕೆ ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News