ರಸ್ತೆ ಅಫಘಾತದಲ್ಲಿ ವ್ಯಕ್ತಿ ಸಾವು: ವೈನ್ ಶಾಪ್ ಎದುರು ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

Update: 2020-11-27 16:26 GMT

ಮೈಸೂರು,ನ.27: ವೈನ್ ಶಾಪ್ ಎದುರು ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಹಿನ್ನೆಲೆ ಬಾರ್ ಮುಂದೆಯೇ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಮಹದೇವಪುರ ಮುಖ್ಯ ರಸ್ತೆಯ ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ ಗ್ರಾಮಗಳಿಗೆ ಹೊಂದಿಕೊಂಡಂತಿರುವ ವೈನ್ ಶಾಪ್ ಮುಂಭಾಗ ರಮ್ಮನಹಳ್ಳಿ ಗ್ರಾಮದ ನಿವಾಸಿ ಮಹದೇವು ಎಂಬಾತ ಗುರುವಾರ ರಾತ್ರಿ ಬಾರ್ ಗೆ ತೆರಳಿ ಹಿಂದಿರುಗುವ ವೇಳೆ ಮೈಸೂರಿನಿಂದ ಮಹದೇವಪುರ ಮಾರ್ಗವಾಗಿ ತೆರಳುತ್ತಿದ್ದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಈ ಹಿನ್ನೆಲೆಯಲ್ಲಿ ವೈನ್ ನಿಂದಲೇ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ವೈನ್ ಶಾಪ್ ಎದುರು ಮಹದೇವು ಶವವಿಟ್ಟು ಪ್ರತಿಭಟನೆ ನಡೆಸಿ ಕೂಡಲೇ ವೈನ್ ಶಾಪ್ ಮುಚ್ಚುವಂತೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News