ಬೆಳಗಾವಿ: ನದೀಮ್ ಸನದಿಗೆ 'ಅಮ್ಮ' ಸಾಹಿತ್ಯ ಪ್ರಶಸ್ತಿ ಪ್ರದಾನ

Update: 2020-11-30 09:31 GMT

ಬೆಳಗಾವಿ : ಕಲಬುರ್ಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಾಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನವು ಕೊಡಮಾಡುವ ರಾಜ್ಯಮಟ್ಟದ 'ಅಮ್ಮ' ಸಾಹಿತ್ಯ ಪ್ರಶಸ್ತಿಯನ್ನು ಇಲ್ಲಿನ ಯುವ ಕವಿ ನದೀಮ್ ಸನದಿ ಅವರಿಗೆ ಇತ್ತೀಚೆಗೆ ಪ್ರದಾನ ಮಾಡಲಾಯಿತು.

ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮುಖಂಡ ಡಾ. ಶರಣ ಪ್ರಕಾಶ ಪಾಟೀಲ, ಕಲಬುರ್ಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಮಹಿಪಾಲರೆಡ್ಡಿ ಮುನ್ನೂರ ದಂಪತಿ ಇದ್ದರು.

ನದೀಮ್ ಅವರ 'ಹುಲಿಯ ನೆತ್ತಿಗೆ ನೆರಳು' ಕವನ ಸಂಕಲನಕ್ಕೆ ಪ್ರಶಸ್ತಿ ದೊರೆತಿದೆ.

ತಾಲೂಕಿನ ಶಿಂದೊಳ್ಳಿ ಗ್ರಾಮದ ನದೀಮ್ ಸನದಿ ಅವರು ಪ್ರಸ್ತುತ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News