ಲಂಚ‌ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

Update: 2020-12-01 13:41 GMT

ಶಿವಮೊಗ್ಗ, ಡಿ.1: ಟ್ರೇಡ್ ಲೈಸನ್ಸ್ ರದ್ದತಿಗಾಗಿ 5 ಸಾವಿರ ಲಂಚ‌ ಪಡೆಯುತ್ತಿರುವಾಗ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳು ದಾಳಿ‌ ನಡೆಸಿ  ಅಧಿಕಾರಿಯೊಬ್ಬರನ್ನು ಬಂಧಿಸಿದ್ದಾರೆ.

ಶಿವಮೊಗ್ಗದ ಎಪಿಎಂಸಿ ಯಾರ್ಡ್ ನಲ್ಲಿರುವ ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರ ಕಚೇರಿಯ ಸೂಪರಿಂಟೆಂಡೆಂಟ್ ಆಗಿ ಕಾರ್ಯ‌ನಿರ್ವಹಿಸುತ್ತಿರುವ ಸಾಮ್ಯ ನಾಯ್ಕ್ (51) ಬಂಧಿತ ಅಧಿಕಾರಿ.

ಟ್ರೇಡ್ ಲೈಸನ್ಸ್ ರದ್ದತಿಗಾಗಿ ಉಮಾಮಹೇಶ್ ಎಂಬವರಿಗೆ ಸಾಮ್ಯ ನಾಯ್ಕ್ 10 ಸಾವಿರ ರೂ. ಲಂಚಕ್ಕೆ ಬೇಡಿಕೆ‌ ಇಟ್ಟಿದ್ದರು ಎನ್ನಲಾಗಿದೆ. ಉಮಾಮಹೇಶ್ ನೀಡಿದ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News