ನೀವು ಯಾರ ಹಿಂದುತ್ವವನ್ನು ಎತ್ತಿ ಹಿಡಿದಿರಿ?: ಡಿಕೆಶಿಗೆ ಬಿಜೆಪಿ ಪ್ರಶ್ನೆ
Update: 2020-12-01 17:01 GMT
ಬೆಂಗಳೂರು, ಡಿ.1: ನಿಮ್ಮದೇ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ಸಮಾಜ ವಿರೋಧಿ ಶಕ್ತಿಗಳು ದಾಳಿ ಮಾಡಿದಾಗ ಸುಮ್ಮನಿದ್ದ ನೀವು ಯಾರ ಹಿಂದುತ್ವವನ್ನು ಎತ್ತಿ ಹಿಡಿದಿರಿ ಡಿ.ಕೆ.ಶಿವಕುಮಾರ್ ಅವರೇ? ಗಲಭೆ ಮಾಡಿದವರನ್ನು ಸಮರ್ಥಿಸಿಕೊಂಡ ನಿಮ್ಮ ನಡೆ ಹಿಂದೂ ಧರ್ಮಕ್ಕೆ ಶೋಭೆ ತರುವಂತಹ ಕಾರ್ಯವೇ? ಸಾಕು ಮಾಡಿ ನಿಮ್ಮ ಕಪಟ ನಾಟಕ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.