ಸಿದ್ದರಾಮಯ್ಯ ತಮ್ಮ ಮೈಲೇಜ್‍ಗಾಗಿ ಮುಸ್ಲಿಂ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ: ಬಿಜೆಪಿ ಟೀಕೆ

Update: 2020-12-03 16:22 GMT

ಬೆಂಗಳೂರು, ಡಿ.3: ಸಿದ್ದರಾಮಯ್ಯ ಮತ್ತು ಐಸಿಸ್ ಉಗ್ರಗಾಮಿ ಸಂಘಟನೆಯ ಮನಸ್ಥಿತಿ, ಎರಡೂ ಒಂದೇ ಆಗಿದೆ. ಇಸ್ಲಾಮಿಕ್ ಸ್ಟೇಟ್‍ಗಾಗಿ ಐಸಿಸ್, ಮುಸ್ಲಿಂ ಸಮುದಾಯದ ಹೆಸರು ಬಳಸಿಕೊಳ್ಳುತ್ತಿದೆ. ಸಿದ್ದರಾಮಯ್ಯ ತಮ್ಮ ಮೈಲೇಜ್‍ಗಾಗಿ ಮುಸ್ಲಿಂ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ. ಇಬ್ಬರಿಂದಲೂ ಅವಮಾನವಾಗುತ್ತಿರುವುದು ಮುಸ್ಲಿಂ ಸಮುದಾಯಕ್ಕೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ದೊಡ್ಡ ಆಲದ ಮರ ಬಿದ್ದಾಗ ನೆಲ ಕಂಪಿಸುವುದು ಸಹಜ’- ಈ ಮಾತುಗಳನ್ನು ನೆನಪಿಸಿಕೊಳ್ಳಿ. ಇಂದಿರಾ ಗಾಂಧಿ ಹತ್ಯೆಯ ಬಳಿಕ 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡದ ಕುರಿತು ರಾಜೀವ್ ಗಾಂಧಿ ನೀಡಿದ್ದ ಹೇಳಿಕೆಯಿದು. ಅಂದು ಸಿಖ್ ಸಮುದಾಯವನ್ನು ಅಟ್ಟಾಡಿಸಿ ಕೊಂದ ಕಾಂಗ್ರೆಸ್ ಇಂದು ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಸಿದ್ದರಾಮಯ್ಯ, 2013-14 ರಲ್ಲಿ 104, 2014-15 ರಲ್ಲಿ 128, 2015-16 ರಲ್ಲಿ 1483, 2016-17 ರಲ್ಲಿ 1185 ಹಾಗೂ 2018-19 ರಲ್ಲಿ 900. ನಿಮ್ಮ ಅವಧಿಯಲ್ಲಿ 3800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೋದಲ್ಲೆಲ್ಲ ಗಡದ್ದಾಗಿ ನಿದ್ದೆ ಮಾಡುತ್ತಿದ್ದ ನಿಮಗೀಗ ಇದ್ದಕ್ಕಿದ್ದಂತೆಯೇ ರೈತರ ಮೇಲೆ ಪ್ರೇಮ ಉಕ್ಕಿದೆ ಅಲ್ಲವೇ? ಎಂದು ಬಿಜೆಪಿ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News