ರೈತ ವಿರೋಧಿ ಶಾಸನಗಳು- ಬಿಜೆಪಿಯ ಹತ್ತು ಸುಳ್ಳುಗಳು

Update: 2020-12-16 05:45 GMT

ಬಿಜೆಪಿ ಸರಕಾರವು 2020ರ ಜೂನ್‌ನಲ್ಲಿ ಸುಗ್ರೀವಾಜ್ಞೆಯ ರೂಪದಲ್ಲಿ ಮೊದಲು ಜಾರಿ ಮಾಡಿದ ಮೂರೂ ಹೊಸ ಕಾಯ್ದೆಗಳ ಕರಡಿನ ಬಗ್ಗೆ ಕೇಂದ್ರವು ಯಾವುದೇ ರಾಜ್ಯ ಸರಕಾರಗಳ ಜೊತೆಗಾಗಲಿ ಅಥವಾ ರೈತ ಸಂಘಟನೆಗಳ ಜೊತೆಗಾಗಲಿ ಯಾವುದೇ ಸಮಾಲೋಚನೆಗಳನ್ನು ಮಾಡಿರಲಿಲ್ಲ. ಅದರಲ್ಲೂ ಕಾಂಟ್ರಾಕ್ಟ್ ಫಾರ್ಮಿಂಗ್ ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯ ಬಗ್ಗೆಯಂತೂ ಪ್ರಸ್ತಾಪ ಕೂಡಾ ಇರಲಿಲ್ಲ. ಆದ್ದರಿಂದ ಸಮಾಲೋಚನೆ ಮಾಡಲಾಗಿತ್ತು ಎನ್ನುವುದು ಬಿಜೆಪಿ ಕುತಂತ್ರವೇ ಹೊರತು ಸತ್ಯವಲ್ಲ.

ದಿಲ್ಲಿಯ ಕೊರೆಯುವ ಚಳಿಯಲ್ಲಿಯೂ ಈ ದೇಶದ ಅನ್ನದಾತರು ನಡೆಸುತ್ತಿರುವ ಚಾರಿತ್ರಿಕ ರೈತ-ಜನಾಂದೋಲನವು ಮೂರು ವಾರಗಳನ್ನು ಪೂರೈಸುತ್ತಿದೆ. ಆದರೂ, ನ್ಯಾಯ-ನೀತಿ, ಪ್ರಜಾತಾಂತ್ರಿಕ ರೀತಿ ರಿವಾಜುಗಳನ್ನೆಲ್ಲಾ ಕೈಬಿಟ್ಟಿರುವ ಸರ್ವಾಧಿಕಾರಿ ಬಿಜೆಪಿ ಸರಕಾರ ತಾನು ಅಸಾಂವಿಧಾನಿಕವಾಗಿ ತಂದಿರುವ ರೈತ ವಿರೋಧಿ-ಕಾರ್ಪೊರೇಟ್ ಪರ ಕಾಯ್ದೆಗಳನ್ನು ಹಿಂದೆೆಗೆದುಕೊಳ್ಳುವುದಿಲ್ಲವೆಂದು ಘೋಷಿಸಿದೆ. ಹೀಗಾಗಿ ರೈತರು ದಿಲ್ಲಿ ಮುತ್ತಿಗೆಯನ್ನು ತೀವ್ರಗೊಳಿಸಿದ್ದಾರೆ.

ಸರಕಾರ ಪ್ರಾರಂಭದಲ್ಲಿ ಮಾತುಕತೆಯ ನಾಟಕವಾಡಿದರೂ ಮತ್ತೊಂದು ಕಡೆಯಿಂದ ರೈತರನ್ನು ಖಾಲಿಸ್ತಾನ್, ದೇಶದ್ರೋಹಿ ಎಂದು ಬದ್ನಾಮ್‌ಗೊಳಿಸುತ್ತಾ, ರೈತ ಸಂಘಟನೆಗಳಲ್ಲಿ ಒಡಕು ತರುವ ಕುತಂತ್ರಗಳಿಗೆ ಮುಂದಾಗಿದೆ. ಆದರೆ ಅದ್ಯಾವುದೂ ಸಫಲವಾಗದೆ ರೈತ ಹೋರಾಟ ಒಗ್ಗಟ್ಟಿನಿಂದ ದಿನೇದಿನೇ ಅಚಲ ಹಾಗೂ ಅಭೇದ್ಯವಾಗುತ್ತಿದೆ.

 ಅದೇ ಸಮಯದಲ್ಲಿ ಈ ದೇಶದ ವಿದ್ಯಾರ್ಥಿಗಳು ನಿವೃತ್ತ ಹಿರಿಯ ಅಧಿಕಾರಿಗಳು, ಪದ್ಮ ಪ್ರಶಸ್ತಿ ವಿಜೇತ ಹಿರಿಯ ಗಣ್ಯರು, ಆಟಗಾರರು, ದೇಶ ವಿದೇಶಗಳ ವಿದ್ವಾಂಸರು ರೈತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರಕಾರ ರೈತ ಹೋರಾಟವನ್ನು ಭೌತಿಕವಾಗಿ ಬಗ್ಗುಬಡೆಯಲು ಒಂದು ಕಡೆ ಅರೆಸೇನಾ ಪಡೆಗಳನ್ನು ಬಳಸಲು ಹಾಗೂ ಮತ್ತೊಂದು ಕಡೆ ರಾಜಕೀಯವಾಗಿ ಅಮಾನ್ಯಗೊಳಿಸಲು ವ್ಯವಸ್ಥಿತವಾಗಿ ಸುಳ್ಳು ಪ್ರಚಾರಗಳನ್ನು ನಡೆಸಲು ಮುಂದಾಗಿದೆ.

ರೈತ ಹೋರಾಟವನ್ನು ಅಮಾನ್ಯಗೊಳಿಸುವ ಸಲುವಾಗಿ ಬಿಜೆಪಿ ರೈತ ಹೋರಾಟದ ಬಗ್ಗೆ ಮತ್ತು ಅವರ ಆಗ್ರಹಗಳ ಬಗ್ಗೆ ಅಪಪ್ರಚಾರ ಮಾಡಲು ದೇಶಾದ್ಯಂತ 700 ಸಭೆಗಳನ್ನು ಹಾಗೂ ನೂರಾರು ಪತ್ರಿಕಾಗೋಷ್ಠಿಗಳನ್ನೂ ನಡೆಸಲು ಮುಂದಾಗಿದೆ.

ಈ ಕುಟಿಲ ಪ್ರಚಾರ ಯುದ್ಧದ ಭಾಗವಾಗಿ ಬಿಜೆಪಿ ಸರಕಾರ ತಾನು ತಂದಿರುವ ರೈತ ವಿರೋಧಿ-ಕಾರ್ಪೊರೇಟ್ ಪರ ನೀತಿಗಳನ್ನು ಸಮರ್ಥಿಸಿಕೊಳ್ಳಲು 10 ಪ್ರಮುಖ ಸುಳ್ಳುಗಳನ್ನು ಹೇಳುತ್ತಿದೆ. ಈಗಾಗಲೇ, ಪ್ರತಿ ರಾಜ್ಯ, ಜಿಲ್ಲೆ ಹಾಗೂ ಗ್ರಾಮಗಳಲ್ಲಿ ಈ ಸುಳ್ಳುಗಳನ್ನು ಬಿತ್ತಲು ಅವರ ಮತಿಭ್ರಾಂತ ಕೂಲಿಪಡೆ ಸಜ್ಜಾಗಿದೆ. ಆ ಸುಳ್ಳುಗಳನ್ನು ಬಯಲು ಮಾಡದೆ ರೈತ ಸತ್ಯಗಳು ಸಾಬೀತಾಗುವುದಿಲ್ಲ. ಆದ್ದರಿಂದ ಬಿಜೆಪಿಯ ಆ ಹತ್ತು ಪ್ರಚಾರಗಳು ಹೇಗೆ ಹಸಿ ಸುಳ್ಳುಗಳೆಂಬುದನ್ನು ಕೆಳಗೆ ವಿವರಿಸಲಾಗಿದೆ.

ಸುಳ್ಳು-1. ಈ ಮೂರೂ ಶಾಸನಗಳು ರೈತರ ಹಿತದ ಬಗ್ಗೆ ಸರಕಾರಕ್ಕಿರುವ ನೀತಿ ಮತ್ತು ನಿಯತ್ತನ್ನು ಸೂಚಿಸುತ್ತವೆ.

ಈ ಶಾಸನಗಳು ಸಂಪೂರ್ಣವಾಗಿ ರೈತಪರವಾಗಿದ್ದಲ್ಲಿ ರೈತರೇಕೆ ಇಷ್ಟು ತೀವ್ರವಾಗಿ ವಿರೋಧಿಸುತ್ತಿದ್ದಾರೆ? ಅವರೆಲ್ಲರನ್ನೂ ದಾರಿ ತಪ್ಪಿಸಲಾಗಿದೆ ಎನ್ನುವ ಮೂಲಕ ಬಿಜೆಪಿ ಸರಕಾರ ರೈತರನ್ನು ಅವಮಾನ ಮಾಡುತ್ತಿಲ್ಲವೇ? ಇದು ರೈತರ ಬಗ್ಗೆ ಬಿಜೆಪಿಯ ಬೇನೀಯತ್ತಲ್ಲವೇ? ಹಾಗಿದ್ದಲ್ಲಿ ಮಾತುಕತೆಯ ಮೊದಲ ಹಂತದಲ್ಲೇ ಆ ಶಾಸನಗಳಲ್ಲಿ ಹಲವಾರು ಲೋಪದೋಷಗಳಿವೆಯೆಂದು ಒಪ್ಪಿಕೊಂಡಿದ್ದು ನಾಟಕವೇ? ಸರಕಾರಕ್ಕೆ ರೈತರ ಬಗ್ಗೆ ನೀಯತ್ತಿದ್ದರೆ ಒಂದು ಕಡೆ ಮಾತುಕತೆಗೆ ಸಿದ್ಧ ಎನ್ನುತ್ತಲೇ ಮತ್ತೊಂದು ಕಡೆ ತಾವು ತಂದಿರುವ ನೀತಿಗಳೆಲ್ಲಾ ಅಪ್ಪಟ ಅಪರಂಜಿ ಎನ್ನುವ ಪ್ರಚಾರ ಸಮರಕ್ಕೆ ಏಕೆ ಮುಂದಾಗಿದೆ? ರೈತರನ್ನು ‘ಬದ್ನಾಮ್’ ಮಾಡುವ ‘ದೇಶದ್ರೋಹಿ’ ಎಂದೆಲ್ಲಾ ಕರೆಯುವ ಸರಕಾರಿ ಪೋಷಿತ ಪ್ರಚಾರಕ್ಕೆ ಏಕೆ ಮುಂದಾಗಿದೆ? ಸುಳ್ಳುಗಳ ಪ್ರಚಾರಕ್ಕೆ ಮುಂದಾಗಿರುವುದೇ ಸರಕಾರ ರೈತರ ಬಗ್ಗೆ ಯಾವುದೇ ನೀತಿ ಅಥವಾ ನೀಯತ್ತನ್ನು ಇಟ್ಟುಕೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಸುಳ್ಳು-2. ಈ ಶಾಸನಗಳನ್ನು ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕಿದೆ.

ಸಂವಿಧಾನದ 7ನೇ ಶೆಡ್ಯೂಲ್‌ನಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪರಮಾಧಿಕಾರ ಇರುವ ಮತ್ತು ಕೇಂದ್ರ ಹಾಗೂ ರಾಜ್ಯ ಎರಡೂ ಕೂಡಾ ಕಾನೂನು ಮಾಡಬಹುದಾದ ಬಾಬತ್ತುಗಳ ಪಟ್ಟಿಯನ್ನು ನೀಡಲಾಗಿದೆ. ಮೊದಲನೆಯದಾಗಿ ಕೃಷಿಗೆ ಸಂಬಂಧಪಟ್ಟ ಯಾವೊಂದು ವಿಷಯವೂ ಕೇಂದ್ರದ ಪಟ್ಟಿಯಲ್ಲಿಲ್ಲ. ರಾಜ್ಯಗಳ ಪಟ್ಟಿಯಲ್ಲಿ 14, 18 ಹಾಗೂ 27ನೇ ಎಂಟ್ರಿಗಳಲ್ಲಿ ಕೃಷಿ ಹಾಗೂ ಭೂಮಿ ಹಿಡುವಳಿ, ಒಡೆತನ, ಗೇಣಿ, ಕೃಷಿ ಮಾರುಕಟ್ಟೆ, ಸಂತೆ ಇತ್ಯಾದಿಗಳೆಲ್ಲವನ್ನೂ ಸಂಪೂರ್ಣವಾಗಿ ರಾಜ್ಯದ ಪರಮಾಧಿಕಾರವಿರುವ ವಿಷಯವೆಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಕೃಷಿಯ ಬಗ್ಗೆ ಕಾನೂನು ಮಾಡುವ ಪರಮಾಧಿಕಾರ ಕೇಂದ್ರ ಸರಕಾರಕ್ಕಿದೆ ಎಂಬುದು ಹಸಿಸುಳ್ಳು.

 ಆದರೆ, ಸಮವರ್ತಿ ಪಟ್ಟಿಯ 33ನೇ ಎಂಟ್ರಿಯಲ್ಲಿ ಸೀಮಿತ ಅರ್ಥದಲ್ಲಿ ಆಹಾರ ಸರಕುಗಳ ವಾಣಿಜ್ಯ ವ್ಯವಹಾರದ ವಿಷಯವನ್ನು ಸೇರಿಸಲಾಗಿದೆ. ಬಿಜೆಪಿ ಸರಕಾರ ಇದನ್ನು ಉಲ್ಲೇಖಿಸುತ್ತಾ ತಾನು ತಂದಿರುವ ಶಾಸನಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಆದರೆ ಇದು ಅಂತರ್ ರಾಜ್ಯ ಹಾಗೂ ಅಂತರ್‌ರಾಷ್ಟ್ರೀಯ ವಾಣಿಜ್ಯದ ಬಗ್ಗೆಯೇ ಹೊರತು ರಾಜ್ಯದೊಳಗಿನ ಕೃಷಿ ಮಾರುಕಟ್ಟೆಗೆ ಸಂಬಂಧಪಟ್ಟಂತೆ ಅಲ್ಲ. ಅಷ್ಟು ಮಾತ್ರವಲ್ಲ. ಸಂವಿಧಾನದ ಮೂರನೇ ತಿದ್ದುಪಡಿಯ ಮೂಲಕ ಇದನ್ನು ಸೇರಿಸಿದಾಗ ಕೆಲವು ರಾಜ್ಯಗಳಲ್ಲಿ ಆಹಾರ ಆಭಾವದ ಪರಿಸ್ಥಿತಿ ಇತ್ತು. ಹೀಗಾಗಿ ಹೆಚ್ಚುವರಿ ಆಹಾರ ಇರುವ ರಾಜ್ಯಗಳಿಂದ ಅಭಾವ ರಾಜ್ಯಗಳಿಗೆ ಆಹಾರ ಸಾಗಾಟ ಮಾಡಲು ಅನುವು ಮಾಡಿಕೊಡುವ ತಾತ್ಕಾಲಿಕ ವ್ಯವಸ್ಥೆ ಭಾಗವಾಗಿ ಎಂಟ್ರಿ 33 ಅನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ಅದು ಕೇಂದ್ರ ಸರಕಾರಕ್ಕೆ ಇಂತಹ ಮರಣ ಶಾಸನಗಳನ್ನು ಮಾಡುವ ಅಧಿಕಾರ ಕೊಡುವುದಿಲ್ಲ. ಅಷ್ಟು ಮಾತ್ರವಲ್ಲ. ಇತ್ತೀಚೆಗೆ, ರೈತ ನಾಯಕರೊಂದಿಗೆ ಮಾತುಕತೆಯ ನಂತರ ಸರಕಾರ ಕಳಿಸಿದ ಅಧಿಕೃತ ಪ್ರಸ್ತಾಪಗಳಲ್ಲಿ ಖಾಸಗಿ ಮಂಡಿಗಳ ರಿಜಿಸ್ಟ್ರೇಷನ್, ವ್ಯಾಜ್ಯಗಳನ್ನು ಸಿವಿಲ್ ನ್ಯಾಯಾಲಯಗಳ ಪರಿಧಿಗೆ ತರುವ ಸಲಹೆಗಳನ್ನು ರಾಜ್ಯ ಸರಕಾರಗಳಿಗೆ ಸೂಚಿಸುವುದಾಗಿ ಕೇಂದ್ರ ಸರಕಾರ ಹೇಳಿತ್ತಲ್ಲವೇ? ಅದರ ಅರ್ಥವೇನು? ಆ ಪರಿಧಿಯಲ್ಲಿ ಕೇಂದ್ರಕ್ಕೆ ಶಾಸನ ಮಾಡುವ ಅಧಿಕಾರ ಇಲ್ಲ ಅಂತಾ ತಾನೇ? ಮೋದಿ ಸರಕಾರ ಸುಳ್ಳು ಹೇಳಿ ಸಿಕ್ಕಿಬಿದ್ದಿದೆ.

ಸುಳ್ಳು-3. ಈ ಶಾಸನಗಳನ್ನು ಮಾಡುವ ಮುನ್ನ ವಿಸ್ತೃತವಾಗಿ ಚರ್ಚಿಸಲಾಗಿದೆ.

 ಈ ಶಾನಗಳನ್ನು ಜಾರಿ ಮಾಡುವ ಮುನ್ನ ರಾಜ್ಯ ಸರಕಾರಗಳೊಂದಿಗೆ ಹಾಗೂ ವಿದ್ವಾಂಸರೊಂದಿಗೆ ವಿಸ್ತೃತವಾಗಿ ಚರ್ಚಿಸಲಾಗಿದೆ ಎಂಬ ಮತ್ತೊಂದು ಹಸಿ ಸುಳ್ಳನ್ನು ಎಗ್ಗುಸಿಗ್ಗಿಲ್ಲದೆ ಬಿಜೆಪಿ ಸರಕಾರ ಪ್ರಚಾರ ಮಾಡುತ್ತಿದೆ. ಅದರಲ್ಲಿ ಮುಖ್ಯವಾಗಿ 2002ರಿಂದ 2014ರವರೆಗೆ, ಪ್ರಧಾನವಾಗಿ APMC ಸುಧಾರಣೆ ಕಾಯ್ದೆಯ ಬಗ್ಗೆ ನಡೆದ ಚರ್ಚೆಗಳನ್ನು ಮಾತ್ರ ನಮೂದಿಸಲಾಗಿದೆ. ವಿಚಿತ್ರವೆಂದರೆ ಅದರಲ್ಲಿ ಯುಪಿಎ ಸರಕಾರ ನಡೆಸಿದ ಸಮಾಲೋಚನೆಗಳನ್ನೂ ತಾನು ಮಾಡಿದ ಸಮಾಲೋಚನೆಗಳ ಲೆಕ್ಕಕ್ಕೆ ಸೇರಿಸಿಕೊಂಡುಬಿಟ್ಟಿದೆ!

ಆದರೆ ಬಿಜೆಪಿ ಸರಕಾರ ಹೇಳುತ್ತಿರುವ ಈ ಎಲ್ಲಾ ಸಮಾಲೋಚನೆಗಳು ಈಗ ಬಿಜೆಪಿ ಸರಕಾರವು ತಂದಿರುವ ಕಾಯ್ದೆಗಳ ಬಗ್ಗೆ ನಡೆದದ್ದಲ್ಲ. ಈಗ ಬಿಜೆಪಿ ಸರಕಾರ ಜಾರಿ ಮಾಡಿರುವ ಕಾಯ್ದೆಗಳೂ ಮತ್ತು ಈ ಹಿಂದೆ ಸಮಾಲೋಚನೆ ಮಾಡಿದ ಕಾಯ್ದೆಗಳ ಸ್ವರೂಪವೇ ಮೂಲಭೂತವಾಗಿ ಭಿನ್ನವಾಗಿವೆ. ಹೀಗಾಗಿ ಹಳೆಯ ಚರ್ಚೆಗಳನ್ನು ಉಲ್ಲೇಖಿಸುತ್ತಿರುವ ಬಿಜೆಪಿ ದೇಶಕ್ಕೆ ಮೋಸ ಮಾಡುತ್ತಿದೆ.

ಬಿಜೆಪಿ ಸರಕಾರವು 2020ರ ಜೂನ್‌ನಲ್ಲಿ ಸುಗ್ರೀವಾಜ್ಞೆಯ ರೂಪದಲ್ಲಿ ಮೊದಲು ಜಾರಿ ಮಾಡಿದ ಮೂರೂ ಹೊಸ ಕಾಯ್ದೆಗಳ ಕರಡಿನ ಬಗ್ಗೆ ಕೇಂದ್ರವು ಯಾವುದೇ ರಾಜ್ಯ ಸರಕಾರಗಳ ಜೊತೆಗಾಗಲಿ ಅಥವಾ ರೈತ ಸಂಘಟನೆಗಳ ಜೊತೆಗಾಗಲಿ ಯಾವುದೇ ಸಮಾಲೋಚನೆಗಳನ್ನು ಮಾಡಿರಲಿಲ್ಲ. ಅದರಲ್ಲೂ ಕಾಂಟ್ರಾಕ್ಟ್ ಫಾರ್ಮಿಂಗ್ ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯ ಬಗ್ಗೆಯಂತೂ ಪ್ರಸ್ತಾಪ ಕೂಡಾ ಇರಲಿಲ್ಲ. ಆದ್ದರಿಂದ ಸಮಾಲೋಚನೆ ಮಾಡಲಾಗಿತ್ತು ಎನ್ನುವುದು ಬಿಜೆಪಿ ಕುತಂತ್ರವೇ ಹೊರತು ಸತ್ಯವಲ್ಲ.

 ಸುಳ್ಳು-4. MSP ರದ್ದಾಗುವುದಿಲ್ಲ.

MSP - ಕನಿಷ್ಠ ಬೆಂಬಲ ಬೆಲೆಯನ್ನು- ರದ್ದು ಮಾಡುವುದಿಲ್ಲ, ಬೇಕಾದರೆ ಸರಕಾರ ಅದರ ಬಗ್ಗೆ ಲಿಖಿತವಾದ ಆಶ್ವಾಸನೆ ಕೊಡಲು ಸಿದ್ಧ ಎನ್ನುವ ಸರಕಾರ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಡದೆ ಖರೀದಿ ಮಾಡುವುದನ್ನು ಶಿಕ್ಷಾರ್ಹ ಅಪರಾಧ ಮಾಡುವ ಶಾಸನ ಮಾಡಲು ಮಾತ್ರ ತಯಾರಿಲ್ಲ. ಹೀಗಾಗಿ MSP ರದ್ದಾಗುವುದಿಲ್ಲ ಎಂಬ ಮೋದಿ ಸರಕಾರದ ಆಶ್ವಾಸನೆಗೂ ಯಾವುದೇ ಆರ್ಥವಿಲ್ಲ.MSP ಯ ಬಗ್ಗೆ ಮೋದಿ ಸರಕಾರದ ನೀತಿ ಮತ್ತು ನಿಯತ್ತು ಎರಡೂ ರೈತರ ಪರವಾಗಿಲ್ಲ. ಹೇಗೆಂದು ನೋಡೋಣ: 

ಪ್ರತಿವರ್ಷ ಕೇಂದ್ರ ಸರಕಾರ ರೈತರು ಬೆಳೆಯುವ 23 ಬೆಳೆಗಳಿಗೆ ಕೇಂದ್ರ ಸರಕಾರದಡಿಯಲ್ಲಿರುವ  Commission on Agricultural Costs & Prices (CACP)- ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡುತ್ತದೆ. ಆದರೆ ವಾಸ್ತವದಲ್ಲಿ ಆ ಬೆಲೆಯಲ್ಲಿ ಖರೀದಿ ಮಾಡುವುದು ಸರಕಾರವೇ ವಿನಃ ಖಾಸಗಿ ವ್ಯಾಪಾರಿಗಳು ಖರೀದಿ ಮಾಡಿದ ಉದಾಹರಣೆ ಬಹಳ ಕಡಿಮೆ. ಈವರೆಗೆ ಸರಕಾರವು ವಿಶೇಷವಾಗಿ ಗಳ ಮೂಲಕ ತಾನೇ ಘೋಷಿಸಿದ ಬೆಲೆಗೆ ಮುಖ್ಯವಾಗಿ ಭತ್ತ ಹಾಗೂ ಗೋಧಿಯನ್ನು ಖರೀದಿಸಿ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಸಂಗ್ರಹಿಸುತ್ತದೆ. ಆನಂತರ ರೇಷನ್ ಅಂಗಡಿಗಳ ಮೂಲಕ ಈ ದೇಶದ ನಗರದ ಹಾಗೂ ಗ್ರಾಮೀಣ ಬಡವರಿಗೆ ಅಗ್ಗದ ದರದಲ್ಲಿ ಸರಬರಾಜು ಮಾಡುತ್ತಾ ಈ ದೇಶದ ಹಾಗೂ ಜನರ ಆಹಾರ ಭದ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿತ್ತು.

ಹೀಗಾಗಿ APMC-MSP-FCI ಇವುಗಳು ಒಂದನ್ನೊಂದು ಅವಲಂಬಿಸಿರುವ ಅವಿನಾಭಾವ ವ್ಯವಸ್ಥೆಯಾಗಿದೆ.

APMC ಮತ್ತು FCI ಗಳಿಲ್ಲದೇ MSP ಯು ರೈತರಿಗೆ ಸಿಗುವುದಿಲ್ಲ. ಏಕೆಂದರೆ ಈಗಿರುವ ವ್ಯವಸ್ಥೆಯಲ್ಲಿ ಸರಕಾರವನ್ನು ಬಿಟ್ಟರೆ ಯಾವುದೇ ಖಾಸಗಿ ಮಂಡಿಗಳು ರೈತರಿಗೆ MSP ಕೊಡುತ್ತಿಲ್ಲ. ಇತ್ತೀಚಿನ ಅಧ್ಯಯನದ ಪ್ರಕಾರವೇ ಕಳೆದ ಎರಡು ತಿಂಗಳಲ್ಲೇ ದೇಶದ 20,000 ನೋಂದಾಯಿತ ಕೃಷಿ ಮಾರುಕಟ್ಟೆಗಳ ಶೇ.90ರಷ್ಟು ಖಾಸಗಿ ಖರೀದಿಗಳಲ್ಲಿ ಸರಕಾರ ಸೂಚಿಸಿರುವ ಬೆಂಬಲ ಬೆಲೆ ನೀಡಲಾಗಿಲ್ಲ. ಇದರಿಂದಾಗಿ ಕಳೆದೆರಡು ತಿಂಗಳ ಖರೀದಿಯಲ್ಲೇ ಈ ದೇಶದ ರೈತಾಪಿಗೆ 2,000 ಕೋಟಿ. ರೂ.ಗಳಷ್ಟು ನಷ್ಟವಾಗಿದೆ. ಅದರಲ್ಲಿ ಕರ್ನಾಟಕದ ಮೆಕ್ಕೆ ಜೋಳದ ಬೆಳೆಗಾರರಿಗೆ ಅಂದಾಜು 330 ಕೋಟಿ ರೂ. ನಷ್ಟವಾಗಿದೆ.

 ಸಾರಾಂಶ ಸ್ಪಷ್ಟ. ಸರಕಾರ ಖರೀದಿ ಮಾಡದಿದ್ದರೆ ಅಥವಾ ಖಾಸಗಿ ವ್ಯಾಪಾರಿಗಳು ಕಡ್ಡಾಯವಾಗಿ MSP ಪಾವತಿಸಬೇಕೆಂಬ ಶಾಸನವನ್ನು ಮಾಡದೇ ರೈತರಿಗೆ  MSP ದಕ್ಕುವುದಿಲ್ಲ. ಆದರೆ ಸರಕಾರ ಅಂತಹ ಶಾಸನ ಮಾಡಲು ಸಿದ್ಧವಿಲ್ಲ. ಬದಲಿಗೆ ಸರಕಾರದ ಖರೀದಿಯನ್ನೇ ಕ್ರಮೇಣವಾಗಿ ಕಡಿಮೆ ಮಾಡಲು ಹಾಗೂ ಖಾಸಗೀಕರಿಸಲು ಮುಂದಾಗಿದೆ. ಉದಾಹರಣೆಗೆ ಮೋದಿ ಸರಕಾರವು 2016ರಲ್ಲಿ ಆಹಾರ ನಿಗಮದ ಪುನರ್‌ರಚನೆ ಹಾಗೂ ಸಾರ್ವಜನಿಕ ಆಹಾರ ಖರೀದಿ ವ್ಯವಸ್ಥೆಯ ಖಾಸಗೀಕರಣದ ಬಗ್ಗೆ ಶಿಫಾರಸು ನೀಡಿದ್ದ ಶಾಂತಕುಮಾರ್ ವರದಿಯನ್ನು ಕೇಂದ್ರ ಸರಕಾರ ಚಾಚೂ ತಪ್ಪದೆ ಒಪ್ಪಿಕೊಂಡಿದೆ. ಈ ಶಿಫಾರಸುಗಳ ಅನ್ವಯ ಈಗಾಗಲೇ ಅಹಾರ ನಿಗಮದ ಗೋದಾಮುಗಳನ್ನು ಅದಾನಿ ಲಾಜಿಸ್ಟಿಕ್ಸ್‌ಗೆ ವಹಿಸಲಾಗಿದೆ. ಅಂತಹ ಒಂದು ಅದಾನಿ ಗೋದಾಮು ಕರ್ನಾಟಕದ ಮಾಲೂರಿನ ಬಳಿಯೂ ಎದ್ದು ನಿಂತಿದೆ.

ಅಷ್ಟು ಮಾತ್ರವಲ್ಲ.Strategy for New India @75 ಎಂಬ ನೀತಿ ಆಯೋಗದ ನೀಲನಕ್ಷೆ ಯೋಜನೆಯ ಪ್ರಕಾರ MSP ಲೆಕ್ಕಾಚಾರ ಹಾಕುತ್ತಿದ್ದ  CACP  ಆಯೋಗವನ್ನೇ ರದ್ದುಮಾಡಿ ಅದರ ಬದಲಿಗೆ ಕೃಷಿ ಮಂಡಳಿ ಸ್ಥಾಪಿಸಬೇಕು ಎಂದು ಸಲಹೆ ಮಾಡಲಾಗಿದೆ. ಹಾಗೆಯೇ ಕನಿಷ್ಠ ಬೆಂಬಲ ಬೆಲೆ (MSP )ವ್ಯವಸ್ಥೆಯನ್ನು ರದ್ದು ಮಾಡಿ ಮಂಡಿಗಳಲ್ಲಿ ಹರಾಜಿನ ಪ್ರಾರಂಭದ ಬೆಲೆಯಾಗಿ ಕನಿಷ್ಠ ಮೀಸಲು ಬೆಲೆ (MSP) ನಿಗದಿ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ..

MSP ಇದು ವ್ಯವಸ್ಥೆಯ ಬಗ್ಗೆ ಮೋದಿ ಸರಕಾರದ ನೀತಿ ಮತ್ತು ನಿಯತ್ತು!

ಸುಳ್ಳು-5. ರದ್ದಾಗುವುದಿಲ್ಲ.

APMC ಗಳ ಕಾಲ ಮುಗಿಯಿತು. ಈಗ ಅವುಗಳ ಅಗತ್ಯವಿಲ್ಲ. ಬರಲಿರುವ ದಿನಗಳಲ್ಲಿ ಎಲ್ಲಾ ರಾಜ್ಯ ಸರಕಾರಗಳು  APMC  ಗಳನ್ನು ವಿಸರ್ಜಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರಕಾರ ಉತ್ತೇಜಿಸುತ್ತದೆ.

ನಿರ್ಮಲಾ ಸೀತಾರಾಮನ್, ನವೆಂಬರ್ 12, 2019

ಇದು APMC  ಗಳ ಬಗ್ಗೆ ಮೋದಿ ಸರಕಾರದ ಅಸಲಿ ನೀತಿ ಮತ್ತು ನಿಯತ್ತು.APMC  ಗಳನ್ನು ರದ್ದುಮಾಡಲಾಗುವುದು ಎಂದು ಕಾಯ್ದೆಯಲ್ಲಿಲ್ಲ.

ಆದರೆ ಅದನ್ನು ನಿಧಾನವಾಗಿ ಮೂಲೆಗುಂಪು ಮಾಡಿ ಅಥವಾ ನಿಧಾನವಾಗಿ ಸಾಯುವಂತೆ ಮಾಡಿ ಖಾಸಗಿ ಮಂಡಿಗಳಿಗೆ ಸಂಪೂರ್ಣ ಅವಕಾಶ ಕಲ್ಪಿಸುವಂತಹ ನೀತಿಯನ್ನು ಮೋದಿ ಸರಕಾರ ಜಾರಿಗೆ ತಂದಿರುವ Farmaers Trade And Commerce (Facilitation and Promotion ) Act-2020  ರಲ್ಲಿ ಸ್ಪಷ್ಟವಾಗಿ ಘೋಷಿಸಲಾಗಿದೆ.

ಉದಾಹರಣೆಗೆ ಈಗಿರುವ APMC ಗಳಲ್ಲಿವ್ಯಾಪಾರಿ ಹಾಗೂ ರೈತರಿಬ್ಬರೂ ತಾವು ಮಾಡುವ ವ್ಯವಹಾರಗಳಿಗೆ ಶುಲ್ಕವನ್ನು ನೀಡಬೇಕು. ಆದರೆ ಹೊಸ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ಖಾಸಗಿ ಮಂಡಿಗಳಲ್ಲಿ ಶುಲ್ಕರಹಿತ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದಲೂ ಸಹಜವಾಗಿ ಹೊಸ ಖಾಸಗಿ ಮಂಡಿಗಳೇ ಆಕರ್ಷಕವಾಗಿ ಕಂಡು ಹಳೇ ಮಂಡಿಗಳು ನಾಶವಾಗುತ್ತವೆ. ಇದನ್ನು ಮಾತುಕತೆಯ ಸಂದರ್ಭದಲ್ಲಿ ಸರಕಾರವು ಕೂಡಾ ಒಪ್ಪಿಕೊಂಡಿತ್ತು!!

ಸುಳ್ಳು-6. ರೈತರು ಎಲ್ಲಿ ಉತ್ತಮ ಬೆಲೆ ಸಿಗುತ್ತದೋ ಅಲ್ಲಿ ಮಾರಾಟ ಮಾಡಬಹುದು.

ಈ ಹೊಸ ಕಾಯ್ದೆ ಬರುವ ಮುಂಚೆಯೂ ದೇಶದಲ್ಲಿ ಎಲ್ಲಿ ಸ್ಪರ್ಧಾತ್ಮಕ ಬೆಲೆ ದೊರೆಯುತ್ತದೋ ಅಲ್ಲಿ ತಮ್ಮ ಸರಕನ್ನು ಮಾರಲು ಅನುವು ಮಾಡಿಕೊಡುವಂತಹ e-NAM (electronic- National Agricultural Market) ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದರೆ ಈ ಸೌಲಭ್ಯವು ರೈತರಿಗೆ ದಕ್ಕಬೇಕಿದ್ದಲ್ಲಿ ದೇಶಾದ್ಯಂತ ಇರುವ ಎಲ್ಲಾ ಕೃಷಿ ಮಾರುಕಟ್ಟೆಗಳ ಮೂಲಭೂತ ಹಾಗೂ ಡಿಜಿಟಲ್ ಸೌಕರ್ಯಗಳನ್ನು ಹೆಚ್ಚಿಸಬೇಕಿತ್ತು. ಆಗಲೂ ಅದರ ಸೌಲಭ್ಯವನ್ನು ಪಡೆದುಕೊಳ್ಳುವ ಸಾಮರ್ಥ್ಯ ದೊಡ್ಡ ರೈತರಿಗೆ ಹಾಗೂ ಕೃಷಿ ವ್ಯಾಪಾರಿಗಳಿಗೆ ಮಾತ್ರ ಸಿಗುತ್ತಿತ್ತು. ಹೀಗಾಗಿಯೇ ಈ ದೇಶದಲ್ಲಿ 14 ಕೋಟಿ ರೈತ ಕುಟುಂಬಗಳಿದ್ದರೆ, 2019ರ ವೇಳೆಗೆ e-NAM ನಲ್ಲಿ ಒಂದು ಕೋಟಿ ರೈತರೂ ನೋಂದಾಯಿಸಿಕೊಳ್ಳಲಿಲ್ಲ. ನೋಂದಾಯಿಸಿಕೊಂಡವರಲ್ಲಿಯೂ ಶೇ.90ರಷ್ಟು ಕೃಷಿ ವ್ಯಾಪಾರಿಗಳೇ ವಿನಃ ರೈತರಲ್ಲ. 

ಸಣ್ಣಪುಟ್ಟ ರೈತರಿಗೆ ತಾವು ಬೆಳೆಯುವ ಕಡೆ ಖಾತರಿ ಮತ್ತು ಲಾಭದಾಯಕ ಬೆಲೆಯನ್ನು ಕೊಟ್ಟರೆ ಲಾಭವಾಗುವುದೇ ವಿನಃ ದೂರದ ದಿಲ್ಲಿಯಲ್ಲಿ ಉತ್ತಮ ಬೆಲೆ ಸಿಗುತ್ತಿದ್ದರೂ ಅಲ್ಲಿಯತನಕ ತನ್ನ ಸರಕುಗಳನ್ನು ಸಾಗಿಸಿ ಮಾರುವ ಚೈತನ್ಯ ರೈತನಿಗಿರುವುದಿಲ್ಲ. ಕಾಯ್ದೆಯ ಲಾಭವನ್ನು ವ್ಯಾಪಾರಿಗಳು ಪಡೆದುಕೊಳ್ಳುತ್ತಾರೆ ಅಷ್ಟೆ. ಈ ಹೊಸ ಕಾಯ್ದೆಯ ಸೆಕ್ಷನ್ 4(i ) ಸಹ ‘‘ಈ ಕಾಯ್ದೆಯು ಕೃಷಿ ವ್ಯಾಪಾರಿಗಳು ರಾಜ್ಯದೊಳಗೆ ಮತ್ತು ಅಂತರ್‌ರಾಜ್ಯ ಮಟ್ಟದಲ್ಲಿ ರೈತನಿಂದ ಕೃಷಿ ಸರಕಿನ ವ್ಯವಹಾರ ಮಾಡಬಹುದು’’ ಎಂದು ಸ್ಪಷ್ಟಪಡಿಸುತ್ತದೆ. ಹೀಗೆ ಇದು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ದೊಡ್ಡ ಕಾರ್ಪೊರೇಟ್ ಕೃಷಿ ವ್ಯಾಪಾರಿಯನ್ನು ಸಬಲೀಕರಿಸುವ ಕಾಯ್ದೆಯೇ ಹೊರತು ರೈತನಿಗೆ ಎಲ್ಲಿ ಉತ್ತಮ ಬೆಲೆ ಸಿಗುತ್ತದೋ ಅಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುವ ಕಾಯ್ದೆಯಲ್ಲ.

 ಸುಳ್ಳು-7. ಖಾಸಗಿ ಮಂಡಿಗಳಲ್ಲಿ ರೈತರು ಬೆಲೆ ಚೌಕಾಸಿ ಮಾಡಬಹುದು.

 ಹಾಗೆ ನೋಡಿದರೆ, ರೈತರು ಹಾಲಿ ಇರುವ APMC ವ್ಯವಸ್ಥೆಯಲ್ಲೂ ಹೆಚ್ಚು ಬೆಲೆ ಕೇಳಬಹುದು. ಆದರೆ ಯಾರೂ ಕೊಡುವುದಿಲ್ಲ ಅಷ್ಟೆ. ಏಕೆಂದರೆ ಅದನ್ನು ಹರಾಜಿನಲ್ಲಿ ಕೊಳ್ಳುವ ವ್ಯಾಪಾರಿಗಳು ತಮ್ಮ ನಡುವೆ ಒಪ್ಪಂದ ಮಾಡಿಕೊಂಡು ರೈತನಿಗೆ ಬೆಲೆ ವಂಚನೆ ಮಾಡುತ್ತಾರೆ. ವಾಸ್ತವದಲ್ಲಿ ಇದೇ ಖಾಸಗಿ ಮಂಡಿಯನ್ನು ಸ್ಥಾಪಿಸಲು ಸರಕಾರ ಕೊಡುತ್ತಿರುವ ಕಾರಣವೂ ಆಗಿದೆ. ಆದರೆ ರೀತಿಯಲ್ಲಿಯೇ, ಈ ಹೊಸ ಕಾಯ್ದೆಯಡಿ ಸ್ಥಾಪಿತವಾಗುವ ಖಾಸಗಿ ಮಂಡಿಯಲ್ಲಿ ವ್ಯಾಪಾರಿಗಳು ಅಥವಾ ಮಂಡಿಗಳು ತಮ್ಮ ನಡುವೆ ಹೀಗೆ ವ್ಯಾಪಾರ ಒಪ್ಪಂದ ಮಾಡಿಕೊಂಡು ರೈತನನ್ನು APMC ರೀತಿಯಲ್ಲಿಯೇ ಶೋಷಿಸಿದರೇ? ಅದನ್ನು ತಡೆಯುವ ಯಾವುದೇ ಕಾನೂನು ರಕ್ಷಣೆ ಈ ಕಾಯ್ದೆಯಲ್ಲಿಲ್ಲ. ಈ ಖಾಸಗಿ ಮಂಡಿಗಳಲ್ಲಿ MSP ಯೂ ಕಡ್ಡಾಯವಿಲ್ಲ.

Farmaers Trade And Commerce (Facilitation and Promotion ) Act-2020 ರ ಪ್ರಕಾರ ವ್ಯಾಪಾರಕ್ಕೆ ಮುಂಚೆ ರೈತರು-ಮಂಡಿಯ ವ್ಯಾಪಾರಿಗಳ ಜೊತೆ ಬೆಲೆ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕು. ಆದರೆ ಖಾಸಗಿ ಮಂಡಿಯಲ್ಲಿನ ವ್ಯಾಪಾರಿಗಳು ಅಥವಾ ಖಾಸಗಿಮಂಡಿಗಳು ತಮ್ಮ ನಡುವೆ ಕಾರ್ಟೆಲ್ ಮಾಡಿಕೊಂಡು ರೈತರನ್ನು ವಂಚಿಸದಂತೆ ತಡೆಯುವ ಯಾವುದೇ ರಕ್ಷಣೆ ಈ ಕಾಯ್ದೆಯಲ್ಲಿಲ್ಲ. ಒಪ್ಪಂದ ಮಾಡಿಕೊಂಡ ದರವನ್ನೂ ಕೊಡದೆ ಉಲ್ಲಂಘನೆಯಾದರೆ ಮಾತ್ರ ಈ ಹೊಸ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ದೂರನ್ನು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಬಳಿ ಕೊಂಡೊಯ್ಯಬಹುದು ಅಷ್ಟೆ. ಸೆಕ್ಷನ್ 15ರ ಪ್ರಕಾರ ನ್ಯಾಯಾಲಯಕ್ಕೆ ದೂರನ್ನು ಒಯ್ಯುವ ಹಕ್ಕನ್ನೂ ರೈತರಿಂದ ಕಸಿದುಕೊಳ್ಳಲಾಗಿದೆ.

ಹೀಗಾಗಿ ಈ ಕಾಯ್ದೆಯು ಬೆಲೆ ಚೌಕಾಸಿ ಮಾಡುವ ಯಾವ ಹೊಸ ತಾಕತ್ತನ್ನೂ ರೈತರಿಗೆ ಕೊಡುವುದಿಲ್ಲ ಅಥವಾ ದುರ್ಬಲ ರೈತನಿಗೆ ಕನಿಷ್ಠ ಬೆಲೆಯನ್ನೂ ಖಾತರಿ ಮಾಡುವ ಅಂಶವೂ ಈ ಕಾಯ್ದೆಯಲ್ಲಿಲ್ಲ. ಬದಲಿಗೆ ವ್ಯಾಪಾರಿಗಳ ಅಧಿಕಾರವನ್ನು ಹಾಗೂ ವಂಚನೆಯನ್ನು ಶಾಸನಬದ್ಧಗೊಳಿಸಲಾಗಿದೆ ಅಷ್ಟೆ.

 ಸುಳ್ಳು-8. ಕಾಂಟ್ರಾಕ್ಟ್ ಫಾರ್ಮಿಂಗ್ ನಿಂದಾಗಿ ಸಣ್ಣ ರೈತರೂ ಬೆಲೆ ಏರಿಳಿತಗಳಿಂದ ಬಚಾವಾಗುತ್ತಾರೆ.

 ಈ ದೇಶದಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್ ಹೊಸದಲ್ಲ. ಕಳೆದ ಒಂದು ದಶಕದಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್ ವ್ಯವಸ್ಥೆಯಲ್ಲಿ ಸಣ್ಣ ರೈತರು ಎದುರಿಸಿರುವ ಆಘಾತಕಾರಿ ಪರಿಣಾಮಗಳನ್ನು ಅಧ್ಯಯನ ಮಾಡಿರುವ ವಿದ್ವಾಂಸರ ವರದಿಯ ಪ್ರಕಾರ ಮೊದಲನೇ ಬಾರಿ ಕಾಂಟ್ರಾಕ್ಟ್ ಫಾರ್ಮಿಂಗ್ ಗೆ ಭೂಮಿ ಕೊಟ್ಟಿರುವವರಲ್ಲಿ ಶೇ.95ರಷ್ಟು ಭಾಗ ಎರಡನೇ ಬಾರಿ ಕಾಂಟ್ರಾಕ್ಟ್‌ಗೆ ಒಪ್ಪಿಕೊಂಡಿಲ್ಲ. ಅದಕ್ಕೆ ಮೂರು ಕಾರಣಗಳನ್ನು ಆ ವರದಿ ಪಟ್ಟಿ ಮಾಡುತ್ತದೆ. ಮೊದಲನೆಯದು ಒಪ್ಪಂದದಂತೆ ಹಣವನ್ನು ಸಮಯಕ್ಕೆ ಸರಿಯಾಗಿ ಸಂದಾಯ ಮಾಡದಿರುವುದು. ಎರಡನೆಯದಾಗಿ ಕಂಪೆನಿಯ ಪರವಾಗಿರುವ ಏಕಪಕ್ಷೀಯ ಒಪ್ಪಂದಗಳು ಮತ್ತು ಅತಿ ಮುಖ್ಯವಾಗಿ ಗುಣಮಟ್ಟದ ನೆಪದಲ್ಲಿ ಬೆಳೆದ ಬೆಳೆಯನ್ನು ಕೊಯಿಲಿನ ನಂತರ ಸಾರಾ ಸಗಟು ನಿರಾಕರಿಸುತ್ತಿರುವುದು. ಅಂದರೆ ಬೆಲೆಗಳಲ್ಲಿ ಏರಿಳಿತರಲಿ, ಬೆಲೆಯನ್ನೇ ಕೊಡದಿರುವಂತಹ ಮೋಸ.

ಆದರೆ, ರೈತರ ಈ ದುರಂತ ಅನುಭವಗಳಿಂದ ಯಾವ ಪಾಠವನ್ನೂ ಕಲಿಯದೆ ಮೋದಿ ಸರಕಾರ ಸಂಪೂರ್ಣವಾಗಿ ಕಾರ್ಪೊರೇಟ್ ಪರವಾದ ಕಾಂಟ್ರಾಕ್ಟ್ ಫಾರ್ಮಿಂಗ್ ಕಾಯ್ದೆಯನ್ನು ಜಾರಿ ಮ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News