ಅಧಿಕ ಆಸ್ತಿ ಹೊಂದಿದ ಆರೋಪ: ಎಸಿಎಫ್ ಮನೆ ಮೇಲೆ ಎಸಿಬಿ ದಾಳಿ
Update: 2020-12-18 16:55 GMT
ಮೈಸೂರು,ಡಿ.18: ಅಧಿಕ ಆಸ್ತಿ ಹೊಂದಿರುವ ಆರೋಪದ ಮೇಲೆ ಮೈಸೂರು ಅರಣ್ಯ ಭವನದ ಎಸಿಎಫ್ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯಕ್ಕಿಂತ ಹೆಚ್ವು ಆಸ್ತಿಹೊಂದಿದ ಆರೋಪದ ಮೇಲೆ ಎಸಿಎಫ್ ಶಿವಶಂಕರ್ ಅವರ ಸರಸ್ವತಿಪುರಂ ನಲ್ಲಿರುವ ಮನೆ, ನಜರ್ ಬಾದ್ ಮತ್ತು ಜೆಸಿ ಬಡಾವಣೆಗಳಲ್ಲಿರುವ ಮನೆಗಳ ಮೇಲೆ ಏಕಕಾಲದಲ್ಲಿ ಶುಕ್ರವಾರ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.