''ಇಲ್ಲಿ ಪೂಜ್ಯನೀಯವಾದ ಗೋವು, ಗೋವಾದಲ್ಲಿ ಪವಿತ್ರವಲ್ಲವೇ ?''

Update: 2020-12-22 17:09 GMT

ಬೆಂಗಳೂರು, ಡಿ.22: ಗೋಹತ್ಯೆ ನಿಷೇಧ ಸಮರ್ಥಿಸಿ ಮಾತನಾಡುವ ಗೋವಾ ರಾಜ್ಯ ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ಅವರು ಗೋವಾದಲ್ಲಿ ಗೋಮಾಂಸ ಸರಬರಾಜಿಗೆ ಟೆಂಡರ್ ಪಡೆದಿದ್ದಾರೆಯೇ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಖಾರವಾಗಿ ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧದಿಂದ ಗೋವಾಕ್ಕೆ ದನದ ಮಾಂಸದ ಕೊರತೆ ಎಂದು ಗೋವಾ ಮುಖ್ಯಮಂತ್ರಿ ಸಾವಂತ್ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಂತೆ ಗೋವಾದಲ್ಲೂ ಗೋಹತ್ಯೆ ನಿಷೇಧ ಮಾಡಿಸುವ ಧೈರ್ಯ ಸಿ.ಟಿ.ರವಿ ಅವರಿಗೆ ಯಾಕಿಲ್ಲ. ಇಲ್ಲಿ ಪೂಜ್ಯನೀಯವಾದ ಗೋವು, ಗೋವಾದಲ್ಲಿ ಪವಿತ್ರವಲ್ಲವೆ ಎಂದು ಕೇಳಿದ್ದಾರೆ.

ಬಿಜೆಪಿ ನಾಯಕರಿಗೆ ಎರಡು ನಾಲಗೆ ಎನ್ನುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News