ಮೈಸೂರು: ಶಾಂತಿಯುತ ಮತದಾನ

Update: 2020-12-27 09:36 GMT

ಮೈಸೂರು, ಡಿ.27: ಮೈಸೂರು ಜಿಲ್ಲೆಯ ಮೂರು ತಾಲೂಕುಗಳಿಗೆ ಎರಡನೇ ಹಂತದ ಗ್ರಾಪಂ ಮತದಾನ ಆರಂಭವಾಗಿದ್ದು ಎಲ್ಲೆಡೆ  ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.

ಜಿಲ್ಲೆತ ಮೈಸೂರು, ನಂಜನಗೂಡು ಮತ್ತು ಟಿ.ನರಸೀಪುರ ತಾಲೂಕುಗಳಲ್ಲಿ ಇಂದು ಬೆಳಗ್ಗೆ 7ರಿಂದ ಚುನಾವಣೆ ನಡೆಯುತ್ತಿದೆ.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಪತ್ನಿ ಲಲಿತಾ ಜೊತೆ ಆಗಮಿಸಿ ಗುಂಗ್ರಾಲ್ ಚತ್ರದ ಮತಗಟ್ಟೆ ಒಂದರಲ್ಲಿ ಮತ ಚಲಾಯಿಸಿದರು.

ಜಿ.ಟಿ.ದೇವೇಗೌಡರ ಸಹೋದರ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹದಿನಾರು ಗ್ರಾಮದಲ್ಲಿ, ಶಾಸಕ ಯತೀಂದ್ರ ಸಿದ್ದರಾಮಯ್ಯ ಸಿದ್ದರಾಮನಹುಂಡಿಯಲ್ಲಿ  ಮತ ಚಲಾಯಸಲಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನಚರಿಕೆ ವಹಿಸಿದ್ದಾರೆ. ಜಿಲ್ಲೆಯಲ್ಲಿ 1,834 ಸದಸ್ಯ ಸ್ಥಾನಗಳಿಗೆ 5,069 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News