ಗ್ರಾಮ ಪಂಚಾಯತ್ ಚುನಾವಣೆ: ಮತ ಎಣಿಕೆ ವೇಳೆ ಅಭ್ಯರ್ಥಿ ಸಾವು

Update: 2020-12-30 16:58 GMT

ವಿಜಯಪುರ: ಮತ ಎಣಿಕೆ ವೇಳೆ ಅಭ್ಯರ್ಥಿಯೋರ್ವರು ಅಸುನೀಗಿರುವ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಸಂಭವಿಸಿದೆ.

ಇಂಡಿ ತಾಲೂಕಿನ ತೆನಹಳ್ಳಿ ಗ್ರಾಮ ಪಂಚಾಯತ್ ವಾರ್ಡ್ 1 ಅಭ್ಯರ್ಥಿ ಹಫೀಝ್ ಖುರೇಷಿ ಸಾವನ್ನಪ್ಪಿದ ಅಭ್ಯರ್ಥಿ.

ಇಂಡಿ ಪಟ್ಟಣದಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಯ ವೇಳೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಹಫೀಝ್ ರನ್ನು ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News